ಕುಶಾಲನಗರ, ಜು. 27: ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಎಂ.ಎಂ. ಚರಣ್ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಸದಸ್ಯರುಗಳನ್ನಾಗಿ ವಿ. ವೈಶಾಖ್, ವಿ.ಡಿ. ಪುಂಡರೀಕಾಕ್ಷ, ಎಚ್.ಎಂ. ಮಧುಸೂದನ್ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.
ಎಂ.ಎಂ. ಚರಣ್ ಕುಶಾಲನಗರ ಪ.ಪಂ. ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.