ಸುಂಟಿಕೊಪ್ಪ,ಜು.26: ಸುಂಟಿಕೊಪ್ಪ 1ನೇ ವಿಭಾಗದ ಶಿವರಾಂ ರೈ ಬಡಾವಣೆಯನ್ನು ಸಂಪೂರ್ಣ ಸೀಲ್‍ಡೌನ್‍ಗೊಳಿಸಲಾಗಿದ್ದು ಎಸ್‍ಡಿಪಿಐ ವತಿಯಿಂದ ಆಹಾರ ಕಿಟ್ ವಿತರಿಸಲಾಯಿತು. ಎಮ್ಮೆಗುಂಡಿಯ ರಸ್ತೆಯ ಶಿವರಾಂ ರೈ ಬಡಾವಣೆಯಲ್ಲಿ ಕುಟುಂಬಗಳಿಗೆ ಪಕ್ಷದ ಅಧ್ಯಕ್ಷ ಬಾಶಿತ್, ಗ್ರಾ.ಪಂ.ಸದಸ್ಯೆ ನಾಗರತ್ನ ಸುರೇಶ್, ಖಜಾಂಜಿ ಕೆ.ಎ.ಲತೀಫ್, ಮೊಯ್ದು ಮತ್ತಿತರರು ಇದ್ದರು.