ಪಾಲಿಬೆಟ್ಟ, ಜು. 19: ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೆಲವು ಪ್ರದೇಶಗಳನ್ನು ಸೀಲ್ಡೌನ್ ಮಾಡಿದ ಹಿನ್ನೆಲೆ ಹಗಲಿರುಳು ಸೇವೆ ಸಲ್ಲಿಸುವ ಕೊರೊನಾ ವಾರಿಯರ್ಸ್ಗಳಿಗೆ ಹುಂಡಿ ಗ್ರಾಮದ ಸ್ನೇಹ ತೀರಂ ವಾಟ್ಸಪ್ ಗ್ರೂಪ್ನ ಸದಸ್ಯರುಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಸನ್ಮಾನಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಸಜಿ ಥೋಮಸ್ ಮಾತನಾಡಿ, ಇಲ್ಲಿನ ಜನರು ಅತ್ಯಂತ ಸಮಸ್ಯೆಗಳಲ್ಲಿ ಸಿಲುಕಿಕೊಂಡು ಆಹಾರಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಗ್ರಾಮದ ಮರ್ಕಜ್ ಪಬ್ಲಿಕ್ ಶಾಲೆ, ಮುಸ್ಲಿಂ ಜಮಾಅತ್, ಕಾರುಣ್ಯ ಸಹಾಯ ನಿಧಿ ಸಂಘಟನೆ, ವಿದೇಶದಲ್ಲಿ ನೆಲೆಸಿರುವ ಇಸ್ಮಾಯಿಲ್, ಸಿದ್ದಾಪುರದ ತರಕಾರಿ ವ್ಯಾಪಾರಿ ಅಶ್ರಫ್, ಹುಂಡಿ ನಿಯಾಜ್ ಸೇರಿದಂತೆ ಹಲವಾರು ದಾನಿಗಳು ಜಾತಿ, ಮತ, ಭೇದವಿಲ್ಲದೆ ಹಾಲು, ಮೀನು, ಕೋಳಿ ಮಾಂಸ, ಮೊಟ್ಟೆ ಸೇರಿದಂತೆ ಆಹಾರ ಧಾನ್ಯಗಳ ಕಿಟ್ಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಎಂದರು.
ಪೆÇಲೀಸ್ ಇಲಾಖೆಯ ರತನ್, ಮೋಹನ್, ಭರತ್, ಆರೋಗ್ಯ ಇಲಾಖೆಯ ಸುಧಾ, ಅಂಗನವಾಡಿ ಕಾರ್ಯಕರ್ತೆ ಸುನೀತಾ, ಸಮೀರ್ ಮತ್ತಿತರರಿಗೆ ಹಣ್ಣು-ಹಂಪಲು ನೀಡಿ ಸನ್ಮಾನಿಸಿದರು.
ಈ ಸಂದರ್ಭ ಸ್ನೇಹ ತೀರಂ ವಾಟ್ಸಾಪ್ ಗ್ರೂಪ್ನ ಉಪಾಧ್ಯಕ್ಷ ಉಮ್ಮರ್, ಕಾರ್ಯದರ್ಶಿ ಜಾಫರ್, ಸದಸ್ಯರುಗಳಾದ ಅಬು ತಾಹಿರ್, ಯೂನಸ್, ಹಕೀಂ, ಸರ್ಫುದ್ದೀನ್, ಅಯೂಬ್, ಇಸ್ಮಾಯಿಲ್, ಮೊಹಮ್ಮದ್, ಶರೀಫ್, ಹುಸೈನ್, ಭಾನುಮತಿ, ಸೈದು, ಚೇಕು, ಮೂಸ ಮತ್ತಿತರರು ಇದ್ದರು.