ಸೋಮವಾರಪೇಟೆ, ಜು. 10: ಏಷಿಯನ್ ಪೈಂಟ್ಸ್ ವತಿಯಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಕ್ಕೆ ಸ್ಯಾನಿಟೈಸರ್ ಸ್ಟಾಂಡನ್ನು ವಿತರಿಸಲಾಯಿತು. ಸ್ಥಳೀಯ ವಿತರಣೆಗಾರ ಎಂ.ಎಂ. ಸುರೇಶ್ ಕೊಡುಗೆ ನೀಡಿದರು. ಹಿರಿಯ ನಾಗರಿಕ ವೇದಿಕೆಯ ಉಪಾಧ್ಯಕ್ಷ ಎಸ್.ಪಿ. ಪ್ರಸನ್ನ, ಜಯಕರ್ನಾಟಕ ಸಂಘಟನೆಯ ತಾಲೂಕು ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ, ಮತ್ತಿತರರು ಇದ್ದರು.