ಕೂಡಿಗೆ, ಜು. 1: ಕುಶಾಲನಗರ ಹೋಬಳಿ ವ್ಯಾಪ್ತಿಯ ನೋಡಲ್ ಅಧಿಕಾರಿಯಾದ ಹಾರಂಗಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ವರದರಾಜ್ ಅವರು ಸೀಲ್ಡೌನ್ ಆದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕುಶಾಲನಗರ ಹೋಬಳಿ ವ್ಯಾಪ್ತಿಯ ಕಣಿವೆ ಸಮೀಪ ಹುಲಸೆ ಗ್ರಾಮದ ಸೀಲ್ಡೌನ್ ಆದ ಪ್ರದೇಶಕ್ಕೆ ಮತ್ತು ನೆಲ್ಲಿಹುದಿಕೇರಿ ಸಮೀಪ ಕರಡಿಗೋಡು ಪ್ರದೇಶಗಳಿಗೆ ನೋಡಲ್ ಅಧಿಕಾರಿ ವರ್ಗದವರು ಭೆÉೀಟಿ ನೀಡಿ ಮಾಹಿತಿ ಸಂಗ್ರಹಿಸಿದರು.
ಈ ಸಂದರ್ಭದಲ್ಲಿ ಆಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ನೇಮಕಗೊಂಡ ಅಧಿಕಾರಿ ವರ್ಗದವರು ಇದ್ದರು.