ನಾಪೆÇೀಕ್ಲು, ಜು. 1: ನಾಪೆÇೀಕ್ಲು ಪಟ್ಟಣದಲ್ಲಿ ಮಾದಕ ವಸ್ತು ವಿರೋಧಿ ದಿನದ ಅಂಗವಾಗಿ ನಾಪೆÇೀಕ್ಲು ಪೆÇಲೀಸರಿಂದ ಪಟ್ಟಣದಲ್ಲಿ ಜಾಥಾ ನಡೆಯಿತು. ಈ ಸಂದರ್ಭ ಜಾಥಾವನ್ನು ಉದ್ದೇಶಿಸಿ ಮಾತನಾಡಿದ ಮಡಿಕೇರಿ ಗ್ರಾಮಾಂತರ ಠಾಣಾ ವೃತ್ತನಿರೀಕ್ಷಕ ದಿವಾಕರ್, ಸಾಮಾಜಿಕ ಪಿಡುಗುಗಳಲ್ಲಿ ಮಾದಕ ಪದಾರ್ಥಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು ಹೆಚ್ಚಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಇದು ಯುವ ಜನಾಂಗದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಮಾದಕ ಪದಾರ್ಥ ಸೇವಿಸುವ ವ್ಯಕ್ತಿಯು ಮಾನಸಿಕವಾಗಿ ಹಾಗೂ ದೈಹಿಕವಾಗಿ ತನ್ನನ್ನು ತಾನು ನಾಶಪಡಿಸುವದರೊಂದಿಗೆ ತನ್ನ ಸಂಗಡಿಗರನ್ನು, ಸಮಾಜವನ್ನು ಅವನತಿಗೆ ತಳ್ಳುವ ಕೆಲಸ ಮಾಡುತ್ತಾನೆ. ಆದುದರಿಂದ ಯುವ ಜನತೆ ಮಾದಕ ವಸ್ತುಗಳ ಸೇವನೆಯಿಂದ ದೂರವಿರಬೇಕು ಎಂದರು. ಜಾಥಾದಲ್ಲಿ ನಾಪೆÇೀಕ್ಲು ಠಾಣಾಧಿಕಾರಿ ಆರ್. ಕಿರಣ್, ಸಹಾಯಕ ಠಾಣಾಧಿಕಾರಿ ವಿಶ್ವನಾಥ್, ಹೆಡ್‍ಕಾನ್ಸ್ಟೇಬಲ್ ಗಣೇಶ್, ಸಿಬ್ಬಂದಿಗಳು, ಸಾರ್ವಜನಿಕರು ಇದ್ದರು.