ಮಡಿಕೇರಿ, ಜೂ. 28: ವೀರಾಜಪೇಟೆ ತಾಲೂಕಿನಲ್ಲಿ ಹೊಸದಾಗಿ ಎಪಿಎಲ್ (ಆದ್ಯೇತರ) ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರು ತಾಲೂಕು ಕಚೇರಿಯ ಆಹಾರ ಶಾಖೆಗೆ ಬಂದು ಅನುಮೋದನೆ (ಅಪ್‍ಡೇಟ್) ಮಾಡಿಸಿಕೊಳ್ಳುವಂತೆ ವೀರಾಜಪೇಟೆ ತಹಶೀಲ್ದಾರರಾದ ನಂದೀಶ್ ಅವರು ತಿಳಿಸಿದ್ದಾರೆ. ಅಲ್ಲದೆ ಅನುಮೋದನೆ ಮಾಡಿಸಿಕೊಳ್ಳದ ಎಪಿಎಲ್ ಅರ್ಜಿಗಳು ಜುಲೈ 31 ರೊಳಗೆ ಆಹಾರ ಇಲಾಖೆಯ ಆನ್‍ಲೈನ್ ತಂತ್ರಾಂಶದಿಂದ ರದ್ದಾಗುತ್ತದೆ ಎಂದು ತಹಶೀಲ್ದಾರರು ತಿಳಿಸಿದ್ದಾರೆ.