*ಗೋಣಿಕೊಪ್ಪಲು, ಜೂ. 8: ಸರ್ಕಾರಿ ಭೂಮಿ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾಗಿರುವ ಶಾಸಕ ಕೆ.ಜಿ. ಬೋಪಯ್ಯ ಅವರು ಪ್ರತಿ ಬುಧವಾರ ವಿಧಾನಸಭೆಯಲ್ಲಿ ಸರ್ಕಾರಿ ಭೂಮಿ ಸಂರಕ್ಷಣಾ ಸಮಿತಿಯ ಸಭೆ ಇರುವುದರಿಂದಾಗಿ ವೀರಾಜಪೇಟೆಯ ಶಾಸಕರ ಕಚೇರಿ ಯಲ್ಲಿ ಶಾಸಕರು ಹಾಜರಿರುವುದಿಲ್ಲ. ಬುಧವಾರದ ಬದಲಾಗಿ ಮುಂದಿನ ದಿನಗಳಲ್ಲಿ ಗುರುವಾರದಂದು ಸಾರ್ವಜನಿಕರ ಭೇಟಿಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ ತಿಳಿಸಿದ್ದಾರೆ.