ವೀರಾಜಪೇಟೆ, ಜೂ. 1: ಕಳೆದ ಮೂರು ವರ್ಷಗಳಿಂದ ವೀರಾಜಪೇಟೆ ಪಟ್ಟಣ ಪಂಚಾಯ್ತಿಯು ಯಾವುದೇ ರೀತಿಯ ಅಭಿವೃದ್ಧಿಯನ್ನು ಕಾಣದೆ ಹತ್ತು ಹಲವು ಸಮಸ್ಯೆಗಳನ್ನು ಎದುರಿಸು ತ್ತಿದ್ದು, ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆ ಇದಕ್ಕೆ ಕಾರಣವಾಗಿದೆ ಯೆಂದು ನಾಗರಿಕ ಸಮಿತಿಯ ಹಿರಿಯ ಸಂಚಾಲಕ ಡಾ. ಐ.ಆರ್. ದುರ್ಗಾಪ್ರಸಾದ್ ತಿಳಿಸಿದ್ದಾರೆ.

ಅವರು ಇಂದು ನಗರದ ಸಮಸ್ಯೆಗಳ ಬಗ್ಗೆ ಆಡಳಿತಾಧಿಕಾರಿ ಯಾಗಿರುವ ತಹಶೀಲ್ದಾರ್ ರವರಿಗೆ ಮನವಿ ಪತ್ರವೊಂದನ್ನು ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಾಮಾನ್ಯ ಜನರು ದೃಢೀಕರಣ ಪತ್ರ ಮುಂತಾದ ಕ್ಷುಲ್ಲಕ ಕೆಲಸಗಳಿಗೆ ಪಂಚಾಯ್ತಿ ಕಚೇರಿಗೆ ದಿನಗಟ್ಟಲೆ ಓಡಾಡುವ ಪರಿಸ್ಥಿತಿ ಬಂದೊದಗಿದೆ. ಸಿಬ್ಬಂದಿಗಳು ವಿನಾ ಕಾರಣ ಸಾರ್ವಜನಿಕರನ್ನು ಸತಾಯಿಸು ತ್ತಿದ್ದಾರೆ. ನಗರದ ಮುಖ್ಯ ರಸ್ತೆಯೂ ಸೇರಿದಂತೆ ಎಲ್ಲಾ ರಸ್ತೆಗಳ ಬದಿಗಳು ನಿರ್ವಹಣೆಯಿಲ್ಲದೆ, ಡಾಮರೀಕರಣ ವಿಲ್ಲದೆ ಗುಂಡಿ ಬಿದ್ದಿದ್ದು. ದ್ವಿಚಕ್ರ ವಾಹನ ಹಾಗೂ ಇತರ ವಾಹನಗಳಿಗೆ ನಿಲುಗಡೆಗೆ ತೊಂದರೆಯಾಗುತ್ತಿದೆ.

ಪ್ರಮುಖ ವಾರ್ಡ್‍ಗಳಾದ ನೆಹರುನಗರ ಹಾಗೂ ವಿದ್ಯಾನಗರಗಳ ಪ್ರವೇಶ ರಸ್ತೆಗಳು ತೀರಾ ಇಕ್ಕಟ್ಟಾಗಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ರುಗಳಿಗೆ ತೊಂದರೆ ಉಂಟಾಗುತ್ತಿದೆ. ಇತ್ತೀಚೆಗೆ ಕೋಟ್ಯಂತರ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣಗೊಂಡು ಉದ್ಘಾಟನೆಗೊಂಡ ಸ್ಥಳೀಯ ಮೀನು ಮಾರುಕಟ್ಟೆ ಕಟ್ಟಡದ ಮಳಿಗೆಗಳು ತೀರಾ ಇಕ್ಕಟ್ಟಾಗಿದ್ದು, ಖರೀದಿದಾರರು ತೊಂದರೆ ಅನುಭವಿಸುತ್ತಿದ್ದಾರೆ. ಈ ಕಾರಣದಿಂದ ನೈರ್ಮಲ್ಯವೂ ಇಲ್ಲ ದಾಗಿದೆ. ಹಳಸಿದ ಮೀನು ಮಾರಾಟ ವಾಗುತ್ತಿದೆಯೆಂದು ಈ ಮುಂಚೆಯೇ ಆಡಳಿತಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಫಲಕಾರಿಯಾಗಿರುವುದಿಲ್ಲ. ಕುರಿ, ಕೋಳಿ ಮಾಂಸ ನೇತುಹಾಕಿ ಮಾರಾಟ ಮಾಡಬಾರದೆಂಬ ಸರಕಾರದ ಕಾನೂನನ್ನು ಬಹಿರಂಗ ವಾಗಿಯೇ ಮಾರಾಟಗಾರರು ಉಲ್ಲಂಘಿಸುತ್ತಿದ್ದಾರೆ. ಕೊರೊನಾ ಕಾಲದಲ್ಲಿ ಜನತೆ ಆರ್ಥಿಕವಾಗಿ ಸಂಕಷ್ಟದಲ್ಲಿ ಇದ್ದರೂ ನೀರಿನ ತೆರಿಗೆ ಹಾಗೂ ಆಸ್ತಿ ತೆರಿಗೆ ಯನ್ನು ಏಕಾ ಏಕಿ ಏರಿಸಿರುತ್ತಾರೆ. ಈ ಕ್ರಮವನ್ನು ನಾಗರಿಕ ಸಮಿತಿಯು ಖಂಡಿಸುತ್ತದೆ. ಸರಕಾರದೊಂದಿಗೆ ವ್ಯವಹರಿಸಿ ಮೇಲಿನ ಸಮಸ್ಯೆಗಳಿಗೆ ಪರಿಹಾರ ಸೂಚಿಸಬೇಕೆಂದು ನಾಗರಿಕ ಸಮಿತಿ ಬಯಸುತ್ತದೆ ಎಂದು ಹೇಳಿದರು. ಮನವಿ ಸಲ್ಲಿಕೆ ಸಂದರ್ಭ ಸಮಿತಿಯ ಕಾರ್ಯದರ್ಶಿ ಪಿ.ಕೆ.ಅಬ್ದುಲ್ ರೆಹೆಮಾನ್, ಸದಸ್ಯರುಗಳಾದ ಸೋಮ, ಲೋಕನಾಥ್, ಎನ್.ಕೆ.ಅಬ್ದುಲ್ ಶರೀಫ್, ಅನಿತಾ ತೆರೇಝಾ ಲೋಬೋ, ಎಲ್.ಜಿ.ಅಶೋಕ್, ಎನ್.ಕೆ.ಗಣಪತಿ ಹಾಜರಿದ್ದರು. ಸಮಸ್ಯೆಗಳ ಬಗ್ಗೆ ಮುಖ್ಯಾಧಿಕಾರಿ ಶ್ರೀಧರ್‍ರವರೊಂದಿಗೆ ಸುದೀರ್ಘ ಚರ್ಚಿಸಲಾಯಿತು.