ಸಿದ್ದಾಪುರ, ಮೇ 30: ಕ್ಷುಲ್ಲಕ ವಿಚಾರಕ್ಕೆ ಮಹಿಳೆಯರ ನಡುವೆ ಮಾರಾಮಾರಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ; ಉಭಯ ಕಡೆಯವರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಪಾಲಿಬೆಟ್ಟದ ನಿವಾಸಿ ಕವಿತ ಎಂಬವರಿಗೆ ಅಲ್ಲಿನ ನಿವಾಸಿಗಳಾದ ಲವ, ಜ್ಯೋತಿ, ತಿಲನ್, ಪ್ರವೀಣ್ ನಾಲ್ವರು ಸೇರಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಆರೋಪದಡಿಯಲ್ಲಿ; ಈ ನಾಲ್ವರ ವಿರುದ್ಧ ಮೊಕದ್ದಮೆ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಜ್ಯೋತಿ ಹಾಗೂ ಅವರ ಪತಿ ಲವ ಎಂಬವರಿಗೆ ಪಾಲಿಬೆಟ್ಟ ನಿವಾಸಿಗಳಾದ ವೆಂಕಟೇಶ್, ಕವಿತಾ, ರೇಣುಕಾ, ಲತಾ, ಈ ನಾಲ್ವರು ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿರುವ ಆರೋಪದಡಿ ಪ್ರಕರಣ ದಾಖಲಾಗಿದೆ. ಪೊಲೀಸರು ಈ ಬಗ್ಗೆ ಮುಂದಿನ ಕ್ರಮ ಕೈಗೊಂಡಿದ್ದಾರೆ.