ಮಡಿಕೇರಿ, ಮೇ 27: ಮಡಿಕೇರಿಯ ಇಂದಿರಾನಗರ ನಿವಾಸಿ ಜಯರಾಂ ಶೆಟ್ಟಿ ಹಾಗೂ ಪುಷ್ಪಾ ದಂಪತಿಯರ ಪುತ್ರ ಮನೋಜ್ ಶೆಟ್ಟಿ ಹಾಗೂ ಮಡಿಕೇರಿಯ ಕೆ.ಬಿ. ಭಾಸ್ಕರ ಶೆಟ್ಟಿ ಹಾಗೂ ಗೀತಾ ದಂಪತಿಯರ ಪುತ್ರಿ, ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಿಗಳಾಗಿರುವ ಅಕ್ಷತಾ ಶೆಟ್ಟಿ ಅವರುಗಳ ವಿವಾಹವು ತಾ. 24 ರಂದು ತಾಳತ್‍ಮನೆಯಲ್ಲಿ ನೆರವೇರಿತು. ಮಡಿಕೇರಿಯ ಕಾವೇರಿ ಹಾಲ್‍ನಲ್ಲಿ ನಿಗದಿಯಾಗಿದ್ದ ವಿವಾಹವನ್ನು ಲಾಕ್‍ಡೌನ್ ಹಿನ್ನೆಲೆಯಲ್ಲಿ ತಾಳತ್‍ಮನೆಯಲ್ಲಿ ಸರಳವಾಗಿ ನೆರವೇರಿಸಲಾಯಿತು. ಕೋವಿಡ್ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.