ಪೊನ್ನಂಪೇಟೆ, ಮೇ 27: ಕೊರೊನಾ ಲಾಕ್‍ಡೌನ್‍ನಿಂದಾಗಿ ಕೆಲಸವಿಲ್ಲದೆ ಸಂಕಷ್ಟಕ್ಕೊಳಗಾಗಿರುವ ಗೋಣಿಕೊಪ್ಪ ವ್ಯಾಪ್ತಿಯಲ್ಲಿರುವ 107 ಟೈಲರ್‍ಗಳಿಗೆ ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ವತಿಯಿಂದ ಆಶ್ರಮದ ಅಧ್ಯಕ್ಷ ಬೋಧ ಸ್ವರೂಪಾನಂದ ಮಹಾರಾಜ್ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದರು. ಈ ಸಂದರ್ಭ ಸ್ವಾಮೀಜಿಗಳಾದ ಅತುಲ್ ಮಹರಾಜ್, ಪರಹಿತನಂದ ಮಹಾರಾಜ್, ಸ್ವಯಂಸೇವಕ ಶರತ್, ಸುರೇಶ್, ದೀಪು, ಸುಬೋದ್, ಬ್ರಿಜೇಶ್ ಇದ್ದರು.