ವೀರಾಜಪೇಟೆ, ಮೇ 20: ವೀರಾಜಪೇಟೆ ಜೈನರ ಬೀದಿಯಲ್ಲಿರುವ ಕರ್ನಾಟಕ ಬ್ಯಾಂಕ್ ಕಟ್ಟಡದ ಮೂರು ಮಳಿಗೆಗಳು ಅಗ್ನಿಗೆ ಆಹುತಿಯಾಗಿವೆ.

ಸತೀಶ್ ಮಾಲೀಕತ್ವದ ಅಯ್ಯಪ್ಪ ಸ್ಟೋರ್ಸ್‍ನಲ್ಲಿ ಶಾರ್ಟ್ ಸಕ್ರ್ಯೂಟ್ ಸಂಭವಿಸಿ ಪಕ್ಕದ ಎರಡು ಮಳಿಗೆಗಳಿಗೂ ವ್ಯಾಪಿಸಿದ ಅಗ್ನಿಯ ಕೆನ್ನಾಲಿಗೆಯಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.