ಗೋಣಿಕೊಪ್ಪಲು. ಮೇ. 20: ಕ್ಷುಲ್ಲಕ ವಿಚಾರದಲ್ಲಿ ಯುವಕರ ನಡುವೆ ಜಗಳವಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತೆರಳಿದ ಪರಿಣಾಮ ಆರೋಪಿಗಳ ಮೇಲೆ ಪೆÇನ್ನಂಪೇಟೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೆÇನ್ನಂಪೇಟೆಯ ಕಾಫಿ ವ್ಯಾಪಾರಿ ವಿನು ಎಂಬವರು ಕ್ಷುಲ್ಲಕ ಕಾರಣ ಮುಂದಿಟ್ಟುಕೊಂಡು ಕಾಟ್ರಕೊಲ್ಲಿ ನಿವಾಸಿ ಗಣೇಶ್ ಎಂಬುವವರ ಮೇಲೆ ಹಲ್ಲೆ ನಡೆಸಿರುವ ಘಟನೆ ಪೆÇನ್ನಂಪೇಟೆ ಪೆÇಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ವಿನು ಹಾಗೂ ಆತನ ಸ್ನೇಹಿತ ಜಯ ತಾ. 17ರ ಭಾನುವಾರ ಸಂಜೆ 7.30ರ ಸಮಯದಲ್ಲಿ ಪೆÇನ್ನಂಪೇಟೆಯ ಕಾಟ್ರಕೊಲ್ಲಿ ರಸ್ತೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಆಟೋಚಾಲಕ ಗಣೇಶ್ ಎಂಬವರ ಮೇಲೆ ಆರೋಪಿ ವಿನು ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಮತ್ತೆ ರಾತ್ರಿ 8 ಗಂಟೆ ಸಮಯದಲ್ಲಿ ಗಣೇಶನ ಮನೆಗೆ ತನ್ನ ಸ್ನೇಹಿತ ಜಯ ಎಂಬವರೊಡನೆ ಧಾವಿಸಿ ಗಣೇಶನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ಜಗಳ ತಡೆಯಲು ಬಂದ ಗಣೇಶನ ಅಕ್ಕ ರಾಜಿ, ಅಕ್ಕನ ಮಗ ಮಂಜು, ಮಂಜುವಿನ ಪತ್ನಿ ಆಶಾ ಎಂಬವರನ್ನು ಅವಾಚ್ಯ ಶಬ್ಧಗಳಿಂದ ಬೈದು, ಜಾತಿ ನಿಂದಿಸಿ ನಾಲ್ವರ ಮೇಲೂ ವಿನು ಹಾಗೂ ಜಯ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಯೊಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅಕ್ಕ ಪಕ್ಕದ ಮನೆಯವರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಆರೋಪಿ ವಿನು ಹಾಗೂ ಆತನ ಸ್ನೇಹಿತ ಜಯ ತಾವು ಬಂದಿದ್ದ ಬೈಕನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಗಣೇಶನ ಅಕ್ಕ ರಾಜಿ ಪೆÇನ್ನಂಪೇಟೆ ಪೆÇಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಠಾಣಾಧಿಕಾರಿ ಡಿ. ಕುಮಾರ್ ಸ್ಥಳಕ್ಕೆ ಧಾವಿಸಿ, ಆರೋಪಿ ವಿನು ಹಾಗೂ ಜಯರನ್ನು ವಶಕ್ಕೆ ಪಡೆದು ಆರೋಪಿ ಗಳ ಮೇಲೆ ಐಪಿಸಿ ಸೆಕ್ಷನ್ ಕಾಲಂ 322, 448, 354, 506, ರೆ/ವಿ 34 ಐಪಿಸಿ ಮತ್ತು 3(1)(ಆರ್) (ಎಸ್) ಎಸ್.ಸಿ/ಎಸ್ಟಿ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದು ವರಿಸಿದ್ದಾರೆ.

- ಹೆಚ್.ಕೆ.ಜಗದೀಶ್