ಪರೀಕ್ಷಾ ಭಯದಿಂದ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಬಿಇಓ ಭೇಟಿ

ತೇರ್ಗಡೆಯಾಗುತ್ತಿದ್ದ ರಿಷಿ, ಉತ್ತಮವಾಗಿ ವ್ಯಾಸಂಗ ಮಾಡುತ್ತಿದ್ದ.

ಈ ಮಧ್ಯೆ ಕೊರೊನಾ ಲಾಕ್‍ಡೌನ್‍ನಿಂದಾಗಿ ಹತ್ತನೇ ತರಗತಿ ವಾರ್ಷಿಕ ಪರೀಕ್ಷೆಯ ಬಗ್ಗೆಯೂ ಗೊಂದಲಗಳು ಏರ್ಪಟ್ಟು, ಅಂತಿಮವಾಗಿ ಪರೀಕ್ಷಾ ದಿನಾಂಕ ಪ್ರಕಟವಾದ ಬಗ್ಗೆ ಟಿ.ವಿ. ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಗೊಂಡಿದ್ದನ್ನು ವೀಕ್ಷಿಸಿದ ರಿಷಿ, ನಂತರ ಬೇಸರ ವ್ಯಕ್ತಪಡಿಸುತ್ತಿದ್ದ. ಮನೆಯಲ್ಲೂ ಯಾರೊಂದಿಗೂ ಮಾತನಾಡುತ್ತಿರಲಿಲ್ಲ ಎನ್ನಲಾಗಿದೆ.

ಕಾಜೂರಿನ ಜಿತೇಂದ್ರ ಮತ್ತು ಕಾವ್ಯ ದಂಪತಿಯ ಹಿರಿಯ ಪುತ್ರನಾಗಿದ್ದ ರಿಷಿ, ನಿನ್ನೆ ದಿನ ಪೋಷಕರು ಕೆಲಸಕ್ಕೆ ತೆರಳಿದ ಸಂದರ್ಭ ಶೌಚಾಲಯದಲ್ಲಿ ನೇಣಿಗೆ ಶರಣಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಪೋಷಕರಲ್ಲಿ ದಿಗ್ಭ್ರಮೆ ಆವರಿಸಿದೆ. ಘಟನೆಯನ್ನು ನೆನೆದು ಪೋಷಕರು ಕಣ್ಣೀರಾಕುತ್ತಿದ್ದಾರೆ.

ಬಿಇಓ ಭೇಟಿ: ಮೃತ ಬಾಲಕನ ಮನೆಗೆ ಇಂದು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ. ಪಾಂಡು ಅವರು ಭೇಟಿ ನೀಡಿದ್ದು, ತಾವೂ ಸೇರಿದಂತೆ ಶಾಲಾಡಳಿತ ಮಂಡಳಿಯ ಮೂಲಕ ರೂ. 5 ಸಾವಿರ ಹಣ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.