ಮಡಿಕೇರಿ, ಮೇ 18: ಕೊಡಗು ಜಿಲ್ಲೆಯಲ್ಲಿ ಈಗಾಗಲೇ ತೆರಿಗೆ ವಿನಾಯ್ತಿಗಾಗಿ ಸಾಕಷ್ಟು ಖಾಸಗಿ ಬಸ್‍ಗಳನ್ನು ಸಾರಿಗೆ ಇಲಾಖೆಗೆ ಶರಣಾಗತಿ ಮಾಡಲಾಗಿದೆ. ಉಳಿದ ಬಸ್‍ಗಳನ್ನು ರಾಜ್ಯ ಸರ್ಕಾರದ ಆದೇಶದಂತೆ 30 ಪ್ರಯಾಣಿಕರಿಗೆ ಸೀಮಿತಗೊಳಿಸಿ ಓಡಿಸಲಾರಂಭಿಸಿದರೂ ಕೊಡಗಿನಲ್ಲಿ ಅದು ಕಷ್ಟಕರವಾಗಲಿದೆ. ಆದ್ದರಿಂದಾಗಿ ಸದ್ಯದ ಮಟ್ಟಿಗೆ ಖಾಸಗಿ ಬಸ್‍ಗಳನ್ನು ಜಿಲ್ಲೆಯಲ್ಲಿ ಓಡಿಸುವ ಸಂಬಂಧ ಯಾವದೇ ತೀರ್ಮಾನ ಕೈಗೊಂಡಿಲ್ಲವೆಂದು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಮೇಶ್ ಜೋಯಪ್ಪ ‘ಶಕ್ತಿ’ಗೆ ತಿಳಿಸಿದ್ದಾರೆ.