ಮಡಿಕೇರಿ, ಮೇ 16: ಸಂಪಾಜೆ ಚೆಕ್‍ಪೋಸ್ಟ್ ಮೂಲಕ ಹೊರಗಿನಿಂದ ಕೊಡಗಿಗೆ ಜನರು ಬರುತ್ತಿರುವ ಸಂಬಂಧ ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭ ಪೊಲೀಸ್ ವೃತ್ತ ನಿರೀಕ್ಷಕ ದಿವಾಕರ್, ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್, ಪ್ರೊಬೆಷನರಿ ಉಪ ನಿರೀಕ್ಷಕ ಪ್ರಕಾಶ್‍ತೊತ್ತಿಮನಿ ಹಾಗೂ ಕಂದಾಯ ಮತ್ತು ಆರೋಗ್ಯ ಕಾರ್ಯಕರ್ತರು ಹಾಜರಿದ್ದರು. ಗಡಿಯಲ್ಲಿ ಯಾವದೇ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಮೇಲ್ಮನೆ ಸದಸ್ಯರು ಅಧಿಕಾರಿಗಳಿಗೆ ಸಲಹೆ ನೀಡಿದರು.