ಸುಂಟಿಕೊಪ್ಪ, ಮೇ 10: ಇಲ್ಲಿನ ವರ್ಕ್ ಶಾಪ್‍ವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೃಷ್ಣ (ಅಪ್ಪಿ-28) ಎಂಬ ಯುವಕ ಹಟ್ಟಿಹೊಳೆ ಸಮೀಪದ ಹೊಳೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ತನ್ನ ಸ್ನೇಹಿತರೊಂದಿಗೆ ಹೊಳೆಗೆ ತೆರಳಿದ್ದ ಕೃಷ್ಣ ಕೆಲ ಹೊತ್ತಿನ ಬಳಿಕ ಮೊಬೈಲ್ ನಲ್ಲಿ ಮಾತನಾಡುತ್ತಾ ಅಲ್ಲಿಂದ ತೆರಳಿದ್ದು, ಎಷ್ಟೇ ಹೊತ್ತಾದರೂ ಹಿಂತಿರುಗದ ಕಾರಣ ಗೆಳೆಯರು ಹುಡುಕಾಟ ನಡೆಸಿದಾಗ ಹೊಳೆಯಲ್ಲಿ ಕೃಷ್ಣನ ಮೃತ ದೇಹ ಪತ್ತೆಯಾಗಿದೆ. ಈ ಬಗ್ಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.