ಮಡಿಕೇರಿ, ಏ. 29: ಶ್ರೀ ಬಸವ ಜಯಂತಿ ಪ್ರಯುಕ್ತ ಮಡಿಕೇರಿಯ ಮಹದೇವಪೇಟೆಯಲ್ಲಿನ ಶ್ರೀ ಬಸವೇಶ್ವರ ದೇವಾಲಯ ವತಿಯಿಂದ ಪೊಲೀಸರು ಮತ್ತು ಪೌರಕಾರ್ಮಿಕರಿಗೆ ಭೋಜನ ವಿತರಿಸಲಾಯಿತು.

80 ಪೊಲೀಸರು ಹಾಗೂ 43 ಪೌರಕಾರ್ಮಿಕರಿಗೆ ಮಧ್ಯಾಹ್ನದ ಊಟವನ್ನು ನೀಡಲಾಯಿತು. ಶ್ರೀ ಬಸವೇಶ್ವರದೇವಾಲಯ ಆಡಳಿತ ಸಮಿತಿ ಕಾರ್ಯದರ್ಶಿ ಜಗದೀಶ್ ಪ್ರಶಾಂತ್, ಉಪಾಧ್ಯಕ್ಷ ಎಸ್.ಎಂ. ದೇವರಾಜ್, ನಿರ್ದೇಶಕ ಬಸವರಾಜು ಹಾಜರಿದ್ದರು.