ಮಡಿಕೇರಿ, ಏ. 29: ಮೈಸೂರು ಖಾಸಗಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದ ನಿವೃತ್ತ ಯೋಧರೊಬ್ಬರಿಗೆ ತಾತ್ಕಾಲಿಕವಾಗಿ ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಲು ಮಾಧ್ಯಮ ಸ್ಪಂದನ ತಂಡ ವ್ಯವಸ್ಥೆ ಮಾಡಿದೆ. ಸ್ಪಂದನ ತಂಡದ ಬಿ.ಆರ್. ಸವಿತಾ ರೈ, ಬೊಳ್ಳಜೀರ ಬಿ. ಅಯ್ಯಪ್ಪ ಹಾಗೂ ಟಿ.ಎನ್. ಮಂಜುನಾಥ್ ಅವರುಗಳು ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ. ವಿಶ್ವನಾಥ್ ಸಿಂಪಿ ಅವರ ಗಮನ ಸೆಳೆದರು. ಸಕಾರಾತ್ಮಕವಾಗಿ ಸ್ಪಂದಿಸಿದ ಡಾ. ಸಿಂಪಿ, ತಾತ್ಕಾಲಿಕವಾಗಿ ಡಯಾಲಿಸಿಸ್ ಮಾಡಲು ಸಮ್ಮತ್ತಿ ಸೂಚಿಸಿದ್ದಾರೆ.