ಗೋಣಿಕೊಪ್ಪ ವರದಿ, ಏ. 29 : ಕೊಡಗು ಹೆಗ್ಗಡೆ ಸಮಾಜದ ವತಿಯಿಂದ ನಡೆಯಬೇಕಿದ್ದ ಕೌಟುಂಬಿಕ ಕ್ರೀಡಾಕೂಟವನ್ನು ರದ್ದುಪಡಿಸಲಾಗಿದೆ. ಮೂರ್ನಾಡು ಪದವಿ ಪೂರ್ವ ಕಾಲೇಜಿನಲ್ಲಿ ಮೇ 1 ರಿಂದ 4 ರವರೆಗೆ ನಡೆಯಬೇಕಿದ್ದ ಹೆಗ್ಗಡೆ ಸಮಾಜದ ಕ್ರೀಡೋತ್ಸವ ರದ್ದುಪಡಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಪಡಿಞರಂಡ ಪ್ರಭು ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.