ಕಳೆದ ಎರಡು ತಿಂಗಳಿಂದ ಜಗತ್ತಿನಲ್ಲಿ ಕೊರೊನಾ ಕೋಲಾಹಲ ವೆಬ್ಬಿಸುತ್ತಿದೆ, ಆದರೆ ಇದುವರೆಗೆ ಅದಕ್ಕೆ ಯಾವುದೇ ಔಷಧಿಯನ್ನು ಪತ್ತೆಹಚ್ಚಲಾಗಲಿಲ್ಲ. ಅದರ ಮದ್ದು ಸಿದ್ಧವಾಗಲು ಇನ್ನೂ 6 ತಿಂಗಳು ಬೇಕಾಗಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಆದ್ದರಿಂದ ಚೀನಾದ ನಂತರ ಇಟಲಿ, ಸ್ಪೇನ್, ಅಮೇರಿಕಾ, ಇರಾನ್ ಇತ್ಯಾದಿ ದೇಶಗಳು ತತ್ತರಿಸಿ ಹೋಗಿವೆ. ಜಗತ್ತಿನಾದ್ಯಂತ 20 ಲಕ್ಷಕ್ಕಿಂತಲೂ ಹೆಚ್ಚು ಜನರಿಗೆ ಈ ಸೋಂಕು ತಗಲಿದ್ದು 1 ಲಕ್ಷದ 20 ಸಾವಿರಕ್ಕಿಂತಲೂ ಹೆಚ್ಚು ಜನರು ಈ ರೋಗಾಣುವಿಗೆ ಬಲಿಯಾಗಿದ್ದಾರೆ. ‘ಜಾಗತಿಕ ಬಲಿಷ್ಠ ರಾಷ್ಟ್ರ’ವೆಂದು ಮೆರೆಯುತ್ತಿದ್ದ ಅಮೇರಿಕಾದ ಸ್ಥಿತಿ ಏನಾಗಬಹುದು, ಎಂದು ಜಗತ್ತಿನ ಎಲ್ಲ ರಾಷ್ಟ್ರಗಳು ನಿರೀಕ್ಷಿಸುತ್ತಿವೆ. ಅದರ ಕಾರಣವೂ ಹಾಗೆಯೆ ಇದೆ. ಇಟಲಿ, ಸ್ಪೇನ್, ಚೀನಾ ಇವೆಲ್ಲವನ್ನು ಹಿಂದಿಕ್ಕಿ ಅತೀ ಹೆಚ್ಚು ಸೋಂಕು ತಗಲಿರುವ ಹಾಗೂ ಅತೀ ಹೆಚ್ಚು ಜನರು ಮೃತಪಟ್ಟಿರು ವವರು ಇದೇ ದೇಶದವರು. ಆರ್ಥಿಕ ಮಹಾಶಕ್ತಿಯಾಗಿರುವ ದೇಶದ ಸ್ಥಿತಿ ಹೀಗಿರುವಾಗ ಇನ್ನಿತರ ದೇಶಗಳ ಗತಿಯೇನಾಗಬಹುದು, ಎಂಬುದರ ಕಲ್ಪನೆ ಮಾಡಲೂ ಸಾಧ್ಯವಿಲ್ಲ. ಕೊರೊನಾದ ಈ ಜಾಗತಿಕ ಹರಡುವಿಕೆಯನ್ನು ತಡೆಗಟ್ಟಲು ಈಗ ಎಲ್ಲ ರಾಷ್ಟ್ರಗಳು ದೊಡ್ಡ ಪ್ರಮಾಣದಲ್ಲಿ ಪ್ರಯತ್ನ ಮಾಡುತ್ತಿವೆ. ಈಗ ಎಲ್ಲ ಸ್ತರಗಳಲ್ಲಿ ಪರಿಹಾರೋಪಾಯವೆಂದು ಸ್ವೀಕರಿಸಲ್ಪಡುವ ಪರ್ಯಾಯವೆಂದರೆ, ಅದು ಭಾರತೀಯ ಸಂಸ್ಕøತಿಯಲ್ಲಿನ ದೈನಂದಿನ ಆಚರಣೆಗಳು ಮತ್ತು ಒಳ್ಳೆಯ ಅಭ್ಯಾಸಗಳು. ಇದರಿಂದ ಸನಾತನ ಭಾರತೀಯ ಸಂಸ್ಕøತಿಯ ಶ್ರೇಷ್ಠತೆ ಮತ್ತು ಮಹತ್ವ ಗಮನಕ್ಕೆ ಬರುತ್ತದೆ. ‘ಕೊರೊನಾ’ದ ವಿರುದ್ಧದ ವಿಜ್ಞಾನಿಗಳ ವೈದ್ಯಕೀಯ ಉಪಾಯ ಯಾವಾಗ ಬರುವುದೋ ಬರಲಿ, ಆದರೆ ಭಾರತೀಯ ಸಂಸ್ಕøತಿಯ ಆಚರಣೆ ಅಂದರೆ ಧರ್ಮಾಚರಣೆಯ ಪದ್ಧತಿಯು ಕೇವಲ ಕೊರೊನಾ ಮಾತ್ರವಲ್ಲದೇ, ಎಲ್ಲ ಕಾಯಿಲೆ, ನೈಸರ್ಗಿಕ ಆಪತ್ತುಗಳು ಮತ್ತು ಇನ್ನಿತರ ಆಪತ್ಕಾಲಿಕ ಪರಿಸ್ಥಿತಿ ಗಳಿಗೂ ಉಪಯುಕ್ತವಾಗಿದೆ’ ಎಂಬುದು ನಿಜ !

ನಮಸ್ಕಾರ : ವಂದನೆ ಮಾಡುವ ಪರಿಪೂರ್ಣ ಪದ್ಧತಿ !

ಕೊರೊನಾದ ಸೋಂಕು ಆಗುವುದರ ಕಾರಣಗಳಲ್ಲಿ ಪಾಶ್ಚಾತ್ಯ ಹಾಗೂ ಯುರೋಪ್ ದೇಶಗಳಲ್ಲಿ ರೂಢಿಯಲ್ಲಿರುವ ಹಸ್ತಲಾಘವ (ಹ್ಯಾಂಡ್ ಶೇಕ್) ಪದ್ಧತಿಯು ಒಂದು ಕಾರಣವಾಗಿದೆ. ಇದು ಅರಿವಾದಾಗ ಇಂಗ್ಲೆಂಡ್, ಅಮೇರಿಕಾ, ಜರ್ಮನಿ, ಫ್ರಾನ್ಸ್, ಐಲೇರ್ಂಡ್, ಇಸ್ರೇಲ್, ಇಟಲಿ ಹಾಗೂ ಇನ್ನೂ ಅನೇಕ ದೇಶಗಳ ಪ್ರಮುಖರು ಪರಸ್ಪರ ಭೇಟಿಯಾದಾಗ ಕೈಜೋಡಿಸಿ ನಮಸ್ಕಾರ ಮಾಡುವ ಭಾರತೀಯ ಪದ್ಧತಿಯನ್ನು ಅವಲಂಬಿಸಿದರು. ನಮಸ್ಕಾರ ಮುದ್ರೆಯು ಹಸ್ತಲಾಘವಕ್ಕೆ ಮಾತ್ರ ಪರ್ಯಾಯವಾಗಿರದೆ ವಂದನೆಯ ಈ ಪದ್ಧತಿಯಲ್ಲಿ ಎದುರಿನವರ ಮುಂದೆ ನಮ್ರತೆಯನ್ನು ತೋರಿಸುವುದು ಅಥವಾ ಆ ವ್ಯಕ್ತಿಯಲ್ಲಿರುವ ಈಶ್ವರನ ಅಂಶದ ಮುಂದೆ ಲೀನವಾಗುವುದು, ಎಂಬ ಆಧ್ಯಾತ್ಮಿಕ ಅರ್ಥ ಅಡಕವಾಗಿದೆ. ಇಂದು ಪಾಶ್ಚಾತ್ಯ ಜಗತ್ತು ಆ ಭಾವನೆಯ ವರೆಗೆ ತಲಪದಿದ್ದರೂ ಕೃತಿಯ ಸ್ತರದಲ್ಲಾದರೂ ಹಸ್ತಲಾಘವ ಪದ್ಧತಿಯನ್ನು ನಿಲ್ಲಿಸಿ ಭಾರತೀಯ ಸಂಸ್ಕೃತಿಗೆ ನಮಸ್ಕಾರ ಮಾಡುತ್ತಿದೆ, ಇದೇನೂ ಸಣ್ಣ ವಿಷಯವಲ್ಲ !

ಆಯುರ್ವೇದದ ಕೊಡುಗೆ !: ಭಾರತೀಯ ಖಾದ್ಯಗಳಲ್ಲ್ಲಿ ಅರಿಶಿನ, ಶುಂಠಿ, ಮೆಣಸಿನ ಕಾಳು, ಓಮ, ಮುಂತಾದ ಜಂತುವಿರೋಧಿ ಹಾಗೂ ಔಷಧಿ ಗುಣವಿರುವ ಪದಾರ್ಥಗಳನ್ನು ದೊಡ್ಡ ಪ್ರಮಾಣದಲ್ಲಿ ಉಪಯೋಗಿಸ ಲಾಗುತ್ತದೆ. ಭೋಜನವು ಕೇವಲ ನಾಲಿಗೆಯ ಚಪಲವನ್ನು ಶಮನ ಮಾಡಲಿಕ್ಕಲ್ಲ, ಅದೊಂದು ಯಜ್ಞಕರ್ಮವಾಗಿದೆ, ಎಂಬುದನ್ನು ಊಟದ ಮೊದಲು ಮಾಡುವ ಪ್ರಾರ್ಥನೆಯಿಂದ ವ್ಯಕ್ತಪಡಿಸುತ್ತಾರೆ. ಭಾರತದಲ್ಲಿ ಇಂದು ಕೂಡ ಅನೇಕ ಮನೆಗಳಿಗೆ ಹೊಸ್ತಿಲು ಇದೆ. ಈ ಹೊಸ್ತಿಲು ಕೇವಲ ವಾಸ್ತು ರಚನೆಯ ಭಾಗವಾಗಿರದೆ ಮನೆಯ ಒಳಗೆ ಮತ್ತು ಹೊರಗೆ ಯಾವ ವಿಷಯ ಇರಬೇಕು, ಎಂಬುದರ ಗಡಿಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅಂಗಳವನ್ನು ಸೆಗಣಿಯಿಂದ ಸಾರಿಸುವ ಪದ್ಧತಿಯಿದೆ. ಗೋಮಯ, ಗೋಅರ್ಕವನ್ನು ಅನೇಕ ಸ್ಥಳಗಳಲ್ಲಿ ಶುದ್ಧೀಕರಣಕ್ಕಾಗಿ ಉಪಯೋಗಿಸಲಾಗುತ್ತದೆ. ಇದರ ಜೊತೆಗೆ ಏಪ್ರಿಲ್ 14 ರಂದು ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಯ್ಸುï ಮಂತ್ರಾಲಯವು (ಅಂದರೆ ಆಯುರ್ವೇದಾದಿ ಪರ್ಯಾಯ ವೈದ್ಯಕೀಯ ಶಾಸ್ತ್ರವನ್ನು ಪುರಸ್ಕರಿಸಲು ನೇಮಿಸಿರುವ ಮಂತ್ರಾಲಯ) ನೀಡಿದ ನಿಯಮಗಳನ್ನು ಪಾಲಿಸಬೇಕು, ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದ್ದರಿಂದ ಈ ಕೃತಿಗಳನ್ನು ದೈನಂದಿನ ಆಚರಣೆಯಲ್ಲಿ ಅನುಸರಿಸಿದರೆ ವ್ಯಕ್ತಿಯ ವೈಯಕ್ತಿಕ, ಕೌಟುಂಬಿಕ ಹಾಗೂ ಸಾಮಾಜಿಕ ಜೀವನವು ಆರೋಗ್ಯಸಂಪನ್ನವಾಗುವುದರಲ್ಲಿ ಸಂಶಯವಿಲ್ಲ.

ಅಗ್ನಿಹೋತ್ರ : ಇದರ ಹೊರತು ರೋಗರುಜಿನೆಗಳಿಂದ ರಕ್ಷಣೆಯಾಗಲು ಹಾಗೂ ವಾತಾವರಣದ ಶುದ್ಧೀಕರಣಕ್ಕಾಗಿ ಪ್ರತಿದಿನ ‘ಅಗ್ನಿಹೋತ್ರ’ ಮಾಡುವ ಸಂಕಲ್ಪನೆಯೂ ಭಾರತೀಯ ಸಂಸ್ಕೃತಿಯಲ್ಲಿದೆ. ಅಗ್ನಿಹೋತ್ರದ ಉಪಾಸನೆ ಯಿಂದ ವಾತಾವರಣ ಶುದ್ಧವಾಗಿ ಒಂದು ರೀತಿಯ ರಕ್ಷಣಾ ಕವಚ ನಿರ್ಮಾಣವಾಗುತ್ತದೆ. ವಿಕಿರಣಗಳಿಂದ ರಕ್ಷಣೆ ಮಾಡುವ ಸಾಮಥ್ರ್ಯವು ಈ ಅಗ್ನಿಹೋತ್ರದಲ್ಲಿದೆ. ಪ್ರತಿದಿನ ಅಗ್ನಿಹೋತ್ರ ಮಾಡುವುದ ರಿಂದ ವಾತಾವರಣದಲ್ಲಿನ ಹಾನಿಕರ ರೋಗಾಣುಗಳ ಪ್ರಮಾಣವು ಗಣನೀಯವಾಗಿ ಕಡಿಮೆಯಾಗುತ್ತದೆ. ಇದು ವೈಜ್ಞಾನಿಕ ಪ್ರಯೋಗದ ಮೂಲಕ ಸಿದ್ಧವಾಗಿದೆ. (ಇಂದಿನ ಲಾಕ್‍ಡೌನ್‍ನ ಅವಧಿಯಲ್ಲಿ ಧರ್ಮದಲ್ಲಿ ಹೇಳಿರುವ ಆಚರಣೆ ಗಳನ್ನು ಪಾಲಿಸಿ ಭಾರತೀಯ ಸಮಾಜವು ಅದರ ಮಹತ್ವವನ್ನು ಅನುಭವಿಸಬೇಕು.)

?ನಾಗರಾಜ ಪೂಜಾರಿ

ಹಿಂದೂ ಜನಜಾಗೃತಿ ಸಮಿತಿ