ಕುಶಾಲನಗರ, ಏ. 27: ಕುಶಾಲನಗರ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಅಪಘಾತಗಳು ನಡೆದಿದ್ದು ಇಬ್ಬರು ದ್ವಿಚಕ್ರ ವಾಹನಗಳ ಚಾಲಕರು ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ಬೆಳಗ್ಗೆ ವರದಿಯಾಗಿದೆ. ಬೈಚನಹಳ್ಳಿಯ ಶೋಭನಾ (54) ಎಂಬವರು ತಮ್ಮ ಸ್ಕೂಟಿಯಲ್ಲಿ (ಕೆಎ.12.ಕ್ಯು.5510) ಕೂಡಿಗೆ ರಸ್ತೆಯಲ್ಲಿ ತೆರಳುತ್ತಿದ್ದ ಸಂದರ್ಭ ಲಾರಿ (ಕೆಎ.42.ಎ.4198) ಡಿಕ್ಕಿಯಾಗಿದ್ದು ಮಹಿಳೆಯ ಕಾಲಿಗೆ ತೀವ್ರ ಪೆಟ್ಟಾಗಿದೆ.

ಕುಶಾಲನಗರ ಸಂಚಾರಿ ಪೊಲೀಸರು ಮೊಕದ್ದಮೆ ದಾಖಲಿಸಿ ಕ್ರಮಕೈಗೊಂಡಿದ್ದಾರೆ.

ಇನ್ನೊಂದು ಘಟನೆಯಲ್ಲಿ ಬೈಕ್‍ವೊಂದರಲ್ಲಿ ತೆರಳುತ್ತಿದ್ದ ಕವನ (21) ಎಂಬಾತ ಬಸವನಹಳ್ಳಿ ಬಳಿ ಆಯತಪ್ಪಿ ಬಿದ್ದಿದ್ದು ಮುಖಕ್ಕೆ ತೀವ್ರ ಗಾಯವಾಗಿದೆ. ಕುಶಾಲನಗರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.