ಪೆÇನ್ನಂಪೇಟೆ. ಏ. 22: ಟಿ. ಶೆಟ್ಟಿಗೇರಿಯ ಬೇಕರಿಯೊಂದರಲ್ಲಿ ಕೇರಳದಲ್ಲಿ ತಯಾರಿಸಿರುವ ತಿಂಡಿ ತಿನಿಸುಗಳನ್ನು ಮಾರಾಟ ಮಾಡುತಿದ್ದ ಬಗ್ಗೆ ಮಾಹಿತಿ ತಿಳಿದು ಅಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಚ್ಚಮಾಡ ಸುಮಂತ್ ಬೇಕರಿಗೆ ಭೇಟಿ ನೀಡಿ ಬೇಕರಿಯಲ್ಲಿ ಮಾರಾಟ ಮಾಡುತಿದ್ದ ಕೇರಳ ತಿನಿಸುಗಳನ್ನು ವಶಕ್ಕೆ ಪಡೆದುಕೊಂಡು ಬೇಕರಿಯನ್ನು ಮುಚ್ಚಿಸಿ ದಂಡ ವಿಧಿಸಿದರು. ಈ ಸಂದರ್ಭ ಪಿಡಿಓ ಕವಿತ, ಗ್ರಾಮ ಲೆಕ್ಕಿಗ ಪ್ರಶಾಂತ್, ಬಿಲ್‍ಕಲೆಕ್ಟರ್ ಪ್ರಶಾಂತ್, ಕಚೇರಿ ಸಿಬ್ಬಂದಿ ಧನು ಇದ್ದರು.