ಮಡಿಕೇರಿ, ಏ. 15: ನಗರ ಸಂಚಾರಿ ಪೊಲೀಸ್ ಠಾಣೆಯ ಸಹಾಯಕ ಉಪ ನಿರೀಕ್ಷಕರಾಗಿದ್ದ ಮೇಕೇರಿಯ ನಿವಾಸಿ ಪಣತಿ ವೆಂಕಟೇಶ್ (57) ಅವರು ಇಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.ಬೆಳಗ್ಗಿನ ಜಾವ ಹೃದಯ ಸಮಸ್ಯೆಗೆ ಒಳಗಾಗಿದ್ದ ಅವರನ್ನು ಕೂಡಲೇ ಅಶ್ವಿನಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕೊಂಡೊಯ್ಯುವ ವೇಳೆ ಕೊಪ್ಪ ಬಳಿ ಕೊನೆಯುಸಿರೆಳೆದಿದ್ದಾರೆ. 1989ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯೊಂದಿಗೆ ಮೂರು ದಶಕಗಳಿಂದ ಸುದೀರ್ಘ ಸೇವೆ ಸಲ್ಲಿಸಿರುವ ವೆಂಕಟೇಶ್ ಅವರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.ವಿಷಯ ತಿಳಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ., ಡಿವೈಎಸ್‍ಪಿ ಬಿ.ಪಿ. ದಿನೇಶ್ ಕುಮಾರ್, ವೃತ್ತ ನಿರೀಕ್ಷಕರುಗಳಾದ ಅನೂಪ್ ಮಾದಪ್ಪ, ದಿವಾಕರ್, ಮೇದಪ್ಪ ಸೇರಿದಂತೆ ಟ್ರಾಫಿಕ್ ಠಾಣಾಧಿಕಾರಿ ಬೆಳ್ಯಪ್ಪ ಹಾಗೂ ಸಿಬ್ಬಂದಿಗಳು ಮೇಕೇರಿ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದರು. ಅಧಿಕಾರಿಗಳು ಮೃತರ ಕುಟುಂಬ ವರ್ಗವನ್ನು ಸಂತೈಸಿದರು. ಅಪರಾಹ್ನ ಮೇಕೇರಿಯಲ್ಲಿ ಅಂತ್ಯಸಂಸ್ಕಾರ ನೆರವೇರಿತು.