ಮಡಿಕೇರಿ, ಏ. 7: ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ಹಣ್ಣು ಹಾಗೂ ತರಕಾರಿ ಬೆಳೆಗಳನ್ನು ಸಗಟು ವ್ಯಾಪಾರಸ್ಥರು ಖರೀದಿಸಲು ಮಡಿಕೇರಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.
ನಗರದ ಎಪಿಎಂಸಿ ಮುಖಾಂತರ ಅಲ್ಲಿನ ಆವರಣದಲ್ಲಿ ವ್ಯಾಪಾರಸ್ಥರು ರಿಯಾಯಿತಿ ದರದಲ್ಲಿ ತಾ. 8 ರಿಂದ ಖರೀದಿಸಲು ಒಪ್ಪಿದ್ದು; ಬೆಳೆಗಾರರು ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾ ಪೊಲೀಸ್, ಎಪಿಎಂಸಿ ಹಾಗೂ ಜಿಲ್ಲಾ ಚೇಂಬರ್ ಹೇಳಿಕೆ ನೀಡಿದ್ದು; ಚೇಂಬರ್ ಪದಾಧಿಕಾರಿಗಳಾದ ಅಂಬೆಕಲ್ ನವೀನ್ ಮೊ. 9448005642, ಧನಂಜಯ್ 9844461777, ವಿಶ್ವ 9886976303 ಇವರನ್ನು ಸಂಪರ್ಕಿಸಲು ಸೂಚಿಸಲಾಗಿದೆ.
ಎಪಿಎಂಸಿ ಸ್ಪಷ್ಟನೆ
ಈ ಬಗ್ಗೆ ಪ್ರತಿಕ್ರಿಯಿಸಿರುವ ಎಪಿಎಂಸಿ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ ಅವರು, ತಾವು ಚೇಂಬರ್ ಅವರ ಮನವಿಗೆ ಗೋದಾಮು ಮಾತ್ರ ನೀಡಿದ್ದು, ಎಪಿಎಂಸಿಯಿಂದ ಯಾವದೇ ನೇರ ಖರೀದಿ ಇರುವದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಬೇಕರಿ ತೆರೆಯುವಂತಿಲ್ಲ
ರಾಜ್ಯ ಸರ್ಕಾರ ಬೇಕರಿಗಳು ತೆರೆಯಲು ಅವಕಾಶ ಕಲ್ಪಿಸಿದ್ದರೂ; ಜಿಲ್ಲೆಯ ಹಿತದೃಷ್ಟಿಯಿಂದ ಜಿಲ್ಲಾಡಳಿತ ಈ ಬಗ್ಗೆ ಅನುಮತಿ ನೀಡದಿದ್ದು; ತಾ. 9 ರಂದು ಜಿಲ್ಲಾ ಉಸ್ತುವಾರಿ ಸಚಿವರು ಆಗಮಿಸಲಿದ್ದು; ಅವರ ಸಮ್ಮುಖದಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.