ಮಡಿಕೇರಿ, ಏ. 4: ನಗರದಲ್ಲಿ ಜಿಲ್ಲಾಡಳಿತ ನಿಗಧಿಪಡಿಸಿದ ಜಾಗಗಳಲ್ಲಿ ತರಕಾರಿ ಸಂತೆ ನಡೆದಿದ್ದು, ಸಂತೆಯ ಅವಧಿ ಮುಗಿದ ಬಳಿಕ ಸಂತೆ ನಡೆದ ಜಾಗಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಅಗ್ನಿ ಶಾಮಕ ಇಲಾಖೆ ವತಿಯಿಂದ ಕ್ರಿಮಿ ನಾಶಕವನ್ನು ಸಿಂಪಡಿಸಲಾಯಿತು.
ಕೋವಿಡ್-19 ಸೋಂಕು ಹರಡದಂತೆ ಸಾರ್ವಜನಿಕರ ಆರೋಗ್ಯ ರಕ್ಷಣೆಯ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕಾ ಕ್ರಮ ವಹಿಸುವ ಸಲುವಾಗಿ ನಿರ್ಧಿಷ್ಟ ಸ್ಥಳಗಳಿಗೆ ಔಷಧಿ ಸಿಂಪಡಣೆ ಮಾಡಲಾಯಿತು.