ಮಡಿಕೇರಿ, ಮಾ.21: ಜಿಲ್ಲಾ ಕೇಂದ್ರ ಕಾರಾಗೃಹದ ಬಂಧಿಗಳಿಗೆ ಕೊರೊನಾ ವೈರಸ್ ಕುರಿತು ಶುಕ್ರವಾರ ಜಾಗೃತಿಗಾಗಿ ವಿಡಿಯೋ ಪ್ರದರ್ಶನ ಹಾಗೂ ಪಿಪಿಟಿ ಮೂಲಕ ಡಿ.ಎಚ್.ಇ.ಓ ರಮೇಶ್ ಅವರು ಮಾಹಿತಿ ನೀಡಿದರು. ಡಾ.ನೀನಾ ಸುಬ್ಬಯ್ಯ, ವೈದ್ಯರು, ಇವರು ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಜೈಲು ನಿವಾಸಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿದರು. ಈ ಕಾರ್ಯಕ್ರಮದಲ್ಲಿ ಧರಣೀಶ್, ಜೈಲ್ ಅಧೀಕ್ಷಕರು, ಡಾ.ನೀನಾ ಸುಬ್ಬಯ್ಯ, ವೈದ್ಯರು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್, ನಿಲೀಮ್, ಜಗದೀಶ್ ಹಾಗೂ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.