ವೀರಾಜಪೇಟೆ, ಮಾ. 17: ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರತರಲು ಕಾಲೇಜು ಮಟ್ಟದಲ್ಲಿ ನೀಡಿರುವ ವೇದಿಕೆಯನ್ನು ಬಳಸಿ ಕೊಂಡು ತಮ್ಮಲ್ಲಿರುವ ಗ್ರಾಮೀಣ ಭಾಗದ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ನಮ್ಮ ಸಂಸ್ಕøತಿಯನ್ನು ಉಳಿಸಿ ಬೆಳೆಸುವಂತಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಹೇಳಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜು ವೀರಾಜಪೇಟೆಯಲ್ಲಿ ನಡೆದ ಕನ್ನಡ-ಇಂಗ್ಲಿಷ್ ಮತ್ತು ಇತಿಹಾಸ ವಿಭಾಗದ ವತಿಯಿಂದ ರಚಿಸಲಾ ಗಿರುವ ವಿದ್ಯಾರ್ಥಿ ಭ್ರಾತೃತ್ವ ವೇದಿಕೆಯ ವತಿಯಿಂದ ಆಯೋಜಿಸಲಾಗಿದ್ದ ‘’ಸುಗ್ಗಿ ಸಂಭ್ರಮ-ಟಿ 20'’ ಎಂಬ ರಾಜ್ಯಮಟ್ಟದ ಎರಡು ದಿನಗಳ ಸ್ಪರ್ಧಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ರಾಜ್ಯಮಟ್ಟದ ಸುಗ್ಗಿ ಸಂಭ್ರಮ ಎಂಬ ಸ್ಪರ್ಧೆಯಿಂದ ಎಲೆಮರೆಯ ಕಾಯಿಯಂತಿರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪ್ರತಿಭೆಗೆ ಅವಕಾಶ ದೊರಕಿದಂತಾಗಿದೆ. ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಮಹತ್ವದ ಘಟ್ಟವಾಗಿದೆ. ಮುಂದೆ ಜೀವನವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಗುರಿ ಮುಟ್ಟುವಂತಾಗಬೇಕು. ಯುವಕರು ದೇಶದ ರಕ್ಷಣೆಗೆ ಸೇನೆಗೆ ಸೇರಲು ಮುಂದಾಗಬೇಕು ಎಂದರಲ್ಲದೆ ಪ್ರತಿಯೊಬ್ಬರು ಹಿರಿಯರಿಗೆ ಮತ್ತು ಗುರುಗಳಿಗೆ ಗೌರವ ನೀಡುವಂತಾಗ ಬೇಕು ಎಂದರು. ಅತಿಥಿಯಾಗಿ ಆಗಮಿಸಿದ್ದ ಸೆಸ್ಕಾಂ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಪಿ.ಎಸ್. ಸುರೇಶ್ ಮಾತನಾಡಿ, ಸುಗ್ಗಿ ಸಂಭ್ರಮದಿಂದ ಪ್ರತಿಭೆಯನ್ನು ಪ್ರದರ್ಶಿಸಲು ವಿದ್ಯಾರ್ಥಿಗಳಿಗೆ ಅವಕಾಶ ದೊರಕಿದ್ದು ಈ ವೇದಿಕೆಯಲ್ಲಿ ಭಾಗವಹಿಸಿದವರು ಮುಂದೆಯೂ ಪರಿಶ್ರಮದಿಂದ ಯಶಸ್ಸು ಕಾಣುವಂತಾಗಿ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ ಮಾತನಾಡಿ, ಸುಗ್ಗಿ ಸಂಭ್ರಮ ಎಂಬುದು ಉತ್ತಮವಾದ ವೇದಿಕೆಯಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿಯೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ಧೈರ್ಯದಿಂದ ಇಂತಹ ವೇದಿಕೆಯ ಅವಕಾಶವನ್ನು ಬಳಸಿಕೊಂಡು ಜೀವನದಲ್ಲಿ ಮುಂದೆ ಬರಬೇಕು. ಮುಂದಿನ ಸಾಲಿನಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದರು.
ರಾಜ್ಯಮಟ್ಟದ 16 ಸ್ಪರ್ಧೆಗಳಲ್ಲಿ 20 ಕಾಲೇಜುಗಳ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿಜೇತರಿಗೆ ಸಮಾರೋಪ ಸಮಾರಂಭದಲ್ಲಿ ಅತಿಥಿಗಳು ಬಹುಮಾನ ವಿತರಿಸಿದರು.
ಈ ಸಂದರ್ಭ ಮೈಸೂರು ಮಹಾರಾಣಿ ಕಾಲೇಜಿನ ವಿದ್ಯಾರ್ಥಿ ಮೇಘನಾ ಮಾತನಾಡಿ, ಸುಗ್ಗಿ ಸಂಭ್ರಮ ಅನ್ನೊದು ಗ್ರಾಮೀಣ ಭಾಗದ ಸೊಗಡು, ಕೊಡಗಿನ ವೀರಾಜಪೇಟೆಯಲ್ಲಿ ಆಯೋಜಿಸಿ ರುವುದು ನಮಗೆ ಸಂತಸ ತಂದಿದೆ ಮುಂದೆಯೂ ಇಂತಹ ಕಾರ್ಯ ಕ್ರಮಗಳು ನಡೆಯುವಂತಾಗಬೇಕು ಎಂದರು.
ಸುಗ್ಗಿ ಸಂಭ್ರಮದ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಕನ್ನಡ ವಿಭಾಗದ ಡಾ. ಡಿ.ಕೆ. ಉಷಾ, ಇತಿಹಾಸ ವಿಭಾಗದ ಪ್ರೊ. ರುದ್ರಾ, ಇಂಗ್ಲೀಷ್ ವಿಭಾಗದ ಪಿ.ಎನ್. ನಾಗರಾಜ್ ಮೂರ್ತಿ, ಪ್ರಾಧ್ಯಾಪಕ ಆರ್. ರಘುರಾಜ್, ಪ್ರೊ. ಕೆ. ಬಸವರಾಜು ಸೇರಿದಂತೆ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.
ಡಿ.ಕೆ. ಉಷಾ ಸ್ವಾಗತಿಸಿ, ವಿ.ಎನ್. ನಾಗರಾಜು ಮೂರ್ತಿ ವರದಿ ಮಂಡಿಸಿದರೆ, ಜೆರಿಟಾ ಮೆನೆಜಸ್ ಮತ್ತು ರೇಖಾ ನಿರೂಪಿಸಿದರು.
ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಬಾವಗೀತೆ, ರಸಪ್ರಶ್ನೆ, ಚರ್ಚಾ ಸ್ಪರ್ಧೆ, ಭಾಷಣ, ಕಿರುನಾಟಕ, ಜಾನಪದ ನೃತ್ಯ, ಸಂವಿಧಾನ, ಛದ್ಮವೇಷ, ನನ್ನ ಮೆಚ್ಚಿನ ಪುಸ್ತಕ, ನನ್ನ ಐತಿಹಾಸಿಕ ಘಟನೆ, ಕವನ ವಾಚನ, ಪ್ರಬಂಧ ಮಂಡನೆ ಸೇರಿದಂತೆ ಅನೇಕ ಸ್ಪರ್ಧಾ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.