ಮಡಿಕೇರಿ, ಮಾ. 10: ಭಾರತ ಸರ್ಕಾರ, ನೆಹರೂ ಯುವ ಕೇಂದ್ರ ಕೊಡಗು ಮತ್ತು ಸಂಪಾಜೆ ಚೆಡಾವು ನೇತಾಜಿ ಗೆಳೆಯರ ಬಳಗ ಇವರ ಸಂಯುಕ್ತ ಆಶ್ರಯದಲ್ಲಿ ಗಾಂಧೀಜಿಯವರ 150ನೇ ಜನ್ಮದಿನಾಚರಣೆಯ ಪ್ರಯುಕ್ತ ಸ್ವಚ್ಛತಾ ಹಾಗೂ ಜಲಸಂರಕ್ಷಣೆ ಅಭಿಯಾನ ಹಾಗೂ ಶ್ರಮದಾನ ಕಾರ್ಯಕ್ರಮ ಸಂಪಾಜೆಯಲ್ಲಿ ನಡೆಯಿತು.

ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತಮುತ್ತ ಸ್ವಚ್ಛತೆ, ಸಂಪಾಜೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತಾ ಶ್ರಮದಾನ, ಚಡಾವು ರಸ್ತೆ ಸ್ವಚ್ಛತೆ ಹಾಗೂ ಪಯಸ್ವಿನಿ ನದಿಯಲ್ಲಿರುವ ಪ್ಲಾಸ್ಟಿಕ್, ಬಟ್ಟೆ ಇನ್ನಿತರ ವಸ್ತುಗಳನ್ನು ತೆಗೆದು ಸ್ವಚ್ಛಗೊಳಿಸಲಾಯಿತು.

ಈ ಕಾರ್ಯಕ್ರಮದಲ್ಲಿ ನೇತಾಜಿ ಗೆಳೆಯರ ಬಳಗದ ಅಧ್ಯಕ್ಷ ಶಶಿಕುಮಾರ್ ಹೆಚ್.ಬಿ., ಉಪಾಧ್ಯಕ್ಷ ನಾಗೇಶ್ ಹೆಚ್.ಎನ್., ಕಾರ್ಯದರ್ಶಿ ಸುಂದರ ಹೆಚ್.ಬಿ., ಖಜಾಂಚಿ ನಾರಾಯಣ ಎಚ್.ಸಿ. ಹಾಗೂ ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಮಲ್ಲಿಕಾರ್ಜುನ ಪಿ., ಸಂತೋಷ್, ತೀರ್ಥರಾಮ, ಸಚಿನ್, ಅಶ್ವಥ್, ಗಣೇಶ್, ಚಂದ್ರಶೇಖರ, ವಸಂತ ಹಾಗೂ ನೆಹರೂ ಯುವ ಕೇಂದ್ರದ ರಾಷ್ಟ್ರೀಯ ಯುವ ಕಾರ್ಯಕರ್ತ ಸಂತೋಷ್ ಕುಮಾರ್ ಹೆಚ್.ಬಿ. ಇತರರು ಭಾಗವಹಿಸಿದ್ದರು.