ಚೆಟ್ಟಳ್ಳಿ, ಫೆ. 25: ಲಾರಿಯೊಂದು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ನಿನ್ನೆ ಸಿದ್ದಾಪುರ ಬಳಿಯ ಒಂಟಿಯಂಗಡಿ ಬಳಿ ನಡೆದಿದೆ.

ಒಂಟಿಯಂಗಡಿಯಿಂದ ಪುತ್ತೂರಿನೆಡೆಗೆ ತೆರಳುತ್ತಿದ್ದ ಲಾರಿ (ಏಂ12ಃ2704) ಯು ರಸ್ತೆ ಬದಿಯಿರುವ ಗುಂಡಿಯನ್ನು ಗಮನಿಸದೇ ವಿದ್ಯುತ್ ಕಂಬಕ್ಕೆ ಹೊಡೆದಿದ್ದು, ಲಾರಿಯ ಮುಂಭಾಗ ಸಂಪೂರ್ಣವಾಗಿ ಜಖಂ ಗೊಂಡಿದೆ.

ಅದೃಷ್ಟವಷಾತ್ ಲಾರಿ ಚಾಲಕ ಅನಂತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಸ್ತೆ ಬದಿಯಿರುವ ಗುಂಡಿಯಿಂದಾಗಿ ಅಪಘಾತಗಳು ಸಂಭವಿಸುತ್ತಿದ್ದು; ಸಂಬಂಧಪಟ್ಟವರು ಇತ್ತ ಗಮನಹರಿಸಿ ಸಂಭವಿಸಲಿರುವ ಅನಾಹುತಗಳನ್ನು ತಪ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.