ಸುಂಟಿಕೊಪ್ಪ,ಫೆ.25: ಮಾದಾಪುರದ ಇಗ್ಗೋಡ್ಲು ಗ್ರಾಮದ ಆಶ್ರಯ ಕಾಲೋನಿಯಲ್ಲಿ ನೂತನವಾಗಿ ಆರಂಭಗೊಂಡ ಶ್ರೀ ಭಗತ್‍ಸಿಂಗ್ ಸಂಘದ ಅಧ್ಯಕ್ಷರಾಗಿ ಬಿ.ಕೆ.ಬಾಲಕೃಷ್ಣ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಆಶ್ರಯ ಕಾಲೋನಿಯ ಚಾಮುಂಡೇಶ್ವರಿ ದೇವಾಲಯದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನೂತನವಾಗಿ ಪದಾಧಿಕಾರಿಗಳನ್ನು ಗ್ರಾಮಸ್ಥರು ನೇಮಕಗೊಳಿಸಿದರು.

ಉಪಾಧ್ಯಕ್ಷರಾಗಿ ಹೆಚ್.ಎಂ.ಹರೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಚೇತನ್ ಕುಮಾರ್, ಖಜಾಂಚಿಯಾಗಿ ಎಂ.ಪ್ರದೀಪ್, ನಿರ್ದೇಶಕರುಗಳಾಗಿ ಎಸ್.ಗಿರೀಶ್, ಆರ್.ಸುಬೇಶ್, ಮನೋಜ್,ಅನಿಲ್,ಸದಸ್ಯರುಗಳಾಗಿ ಕೃಷ್ಣಪ್ಪ(ಅಣ್ಣು), ಅಭಿಜಿತ್, ಆರ್.ಮೋಹನ(ಕಿಶ), ಈ.ಅಕ್ಷಯ್, ಜೋಸೆಫ್, ಎಂ.ಮಂಜುನಾಥ, ಎಂ.ಕೆ. ಹೇಮಂತ್, ಅಣ್ಣು, ಬಸವರಾಜು(ಸಂತೋಷ್) ಇವರುಗಳು ನೇಮಕಗೊಂಡರು. ಗ್ರಾಮದ ಶುಚಿತ್ವ, ಶ್ರಮದಾನ, ಬಡವರಿಗೆ ಸಹಾಯ, ಅನಾರೋಗ್ಯ ಪೀಡಿತರಿಗೆ ಸಹಾಯಹಸ್ತ, ರಕ್ತದಾನ, ಎಲ್ಲರೊಂದಿಗೆ ಬಾಂಧವ್ಯ ಬೆಸೆದು ಸುಖಿ ಗ್ರಾಮವನ್ನಾಗಿ ಮಾಡುವ ನಿರ್ಧಾರಗಳು ಸಭೆಯಲ್ಲಿ ಚರ್ಚಿಸಲಾಯಿತು.