ಗೋಣಿಕೊಪ್ಪ ವರದಿ, ಫೆ. 25 : ಜಿಲ್ಲಾ ಪಂಚಾಯಿತಿ ಅನುದಾನದಿಂದ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ರೂ. 42 ಲಕ್ಷ ಅನುದಾನದ 4 ಅಭಿವೃದ್ಧಿ ಕಾಮಗಾರಿಗೆ ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಜಾ ಸಾಜಿ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಹುದಿಕೇರಿ ಗ್ರಾಮದಲ್ಲಿ ರೂ. 18 ಲಕ್ಷದ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಸ್ಥಳೀಯ ಮುಖಂಡರೊಂದಿಗೆ ಪೂಜೆ ನೆರವೇರಿಸಿದರು. ಇದರೊಂದಿಗೆ ತಲಾ ರೂ. 8 ಲಕ್ಷ ಅನುದಾನದಲ್ಲಿ ಕೋಟೂರು ಗ್ರಾಮದ ಮಹಾದೇವರ ಕಾಲೋನಿಗೆ ನೀರು ಸರಬರಾಜು ಪೈಪ್ ಲೈನ್ ಅಳವಡಿಕೆ, ಬೆಳ್ಳೂರು ಗ್ರಾಮದ ಹರಿಜನ ಕಾಲೋನಿಗೆ ಕುಡಿಯುವ ನೀರಿನ ಸರಬರಾಜು, ತೂಚಮಕೇರಿ ಗ್ರಾಮಕ್ಕೆ ಕುಡಿಯುವ ನೀರಿನ ಸರಬರಾಜು ಯೋಜನೆಗೂ ಚಾಲನೆ ನೀಡಲಾಯಿತು.

ಈ ಸಂದರ್ಭ ಜಿ. ಪಂ. ಮಾಜಿ ಸದಸ್ಯ ಚೆಕ್ಕೇರ. ಕೆ ಸೋಮಯ್ಯ, ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಹುದಿಕೇರಿ ಗ್ರಾ. ಪಂ. ಅಧ್ಯಕ್ಷೆ ಕೆ. ಆರ್. ಸುಧಾ, ಉಪಾಧ್ಯಕ್ಷೆ ಸುನಿತ ಮೋಹನ್, ಸದಸ್ಯರಾದ ಚಂಗುಲಂಡ ಸೂರಜ್, ಗೊಂಬೆ, ರೇಖಾ ಪ್ರಮುಖರಾದ ವಾಸು ಕುಟ್ಟಪ್ಪ, ಮೋಹನ್, ಬಿ. ಎ. ಪ್ರಕಾಶ್, ಮುತ್ತಣ್ಣ, ಕರುಂಬಯ್ಯ ಇದ್ದರು.