ಬೆಂಗಳೂರು, ಫೆ. 10: ವಿಧಾನಸಭೆ ಉಪಚುನಾವಣೆಯಲ್ಲಿ ಗೆದ್ದು ಬಿಜೆಪಿ ಸರ್ಕಾರ ರಚನೆಗೆ ಕಾರಣೀಭೂತರಾದವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಖಾತೆಗಳನ್ನು ಹಂಚಿಕೆಮಾಡಿದ್ದಾರೆ. ರಮೇಶ್ ಲಕ್ಷ್ಮಣರಾವ್ ಜಾರಕಿಹೊಳಿಗೆ ಜಲ ಸಂಪನ್ಮೂಲ ಖಾತೆ ನೀಡಲಾಗಿದೆ. ಭೈರತಿ ಬಸವರಾಜು ಅವರಿಗೆ ಬೆಂಗಳೂರು ಹೊರತುಪಡಿಸಿದಂತೆ ನಗರಾಭಿವೃದ್ಧಿ, ಎಸ್.ಟಿ. ಸೋಮಶೇಖರ್‍ಗೆ ಸಹಕಾರ ಇಲಾಖೆ ಜವಾಬ್ದಾರಿ ವಹಿಸಲಾಗಿದೆ. ಡಾ. ಕೆ. ಸುಧಾಕರ್ ಗೆ ವೈದ್ಯಕೀಯ ಶಿಕ್ಷಣ, ಬಿ.ಸಿ ಪಾಟೀಲ್ ಅವರಿಗೆ ಅರಣ್ಯ, ಶ್ರೀಮಂತ ಪಾಟೀಲ್ ಅವರಿಗೆ ಜವಳಿ ಖಾತೆ ನೀಡಲಾಗಿದೆ. ಶಿವರಾಮ್ ಹೆಬ್ಬಾರ್ ಅವರಿಗೆ ಕಾರ್ಮಿಕ ಖಾತೆ, ನಾರಾಯಣ ಗೌಡ ಅವರಿಗೆ ಪೌರಾಡಳಿತ ಮತ್ತು ತೋಟಗಾರಿಕೆ ಖಾತೆ, ಕೆ. ಗೋಪಾಲಯ್ಯ ಅವರಿಗೆ ಸಣ್ಣ ಕೈಗಾರಿಕೆ, ಸಕ್ಕರೆ ಖಾತೆ, ಆನಂದ್ ಸಿಂಗ್ ಗೆ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ನೀಡಲಾಗಿದೆ. ಮಾಜಿ ಸಚಿವ ಡಿ.ಕೆ. ಶಿವಕುಮಾರ್ ನಿಭಾಯಿಸುತ್ತಿದ್ದ ಜಲ ಸಂಪನ್ಮೂಲ ಖಾತೆಯನ್ನು ತಮಗೇ ನೀಡಬೇಕು ಎಂದು ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದರು. ಶಿವಕುಮಾರ್ ಗೆ ಸರಿಸಮನಾಗಿ ನಿಲ್ಲಬೇಕೆಂಬ ಅವರ ಬೇಡಿಕೆಯನ್ನು (ಮೊದಲ ಪುಟದಿಂದ) ಯಡಿಯೂರಪ್ಪ ಕೊನೆಗೂ ಈಡೇರಿಸಿದ್ದಾರೆ. ನಗರಾಭಿವೃದ್ಧಿ ಖಾತೆಗಾಗಿ ಭಾರೀ ಪೈಪೆÇೀಟಿ ಏರ್ಪಟ್ಟಿತ್ತು. ಆದರೆ ಬೆಂಗಳೂರು ನಗರಾಭಿವೃದ್ಧಿಯನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಬಿಡಿಎ, ಬಿ.ಡಬ್ಲ್ಯೊ.ಎಸ್.ಎಸ್.ಬಿ, ಬಿ.ಎಂ.ಆರ್.ಡಿ.ಎ., ಬಿ.ಎಂ.ಆರ್.ಸಿ.ಎಲ್, ಕೆ.ಯು.ಡಬ್ಲ್ಯೊ.ಎಸ್.ಡಿ.ಬಿ, ಕೆ.ಯು.ಐ.ಡಿ.ಎಫ್.ಸಿ, ನಗರಾಭಿವೃದ್ಧಿ ಯೋಜನಾ ನಿರ್ದೇಶನಾಲಯವನ್ನು ಹೊರತುಪಡಿಸಿ ನಗರಾಭಿವೃದ್ಧಿ ಇಲಾಖೆಯನ್ನು ಭೈರತಿ ಬಸಬರಾಜು ಅವರಿಗೆ ನೀಡಿದ್ದಾರೆ. ಡಾ. ಕೆ. ಸುಧಾಕರ್ ಅವರಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ನೀಡಿದ್ದು, ತಮಗೆ ವಹಿಸಿರುವ ವೈದ್ಯಕೀಯ ಶಿಕ್ಷಣ ಇಲಾಖೆ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ತೋಡಿಕೊಂಡಿದ್ದಾರೆ. ತಾವು ಕೇಳಿದ್ದೇ ಒಂದು, ಮುಖ್ಯಮಂತ್ರಿ ಅವರು ತಮಗೆ ವಹಿಸಿದ್ದೇ ಮತ್ತೊಂದು. ಆದರೆ ಈ ಬಗ್ಗೆ ತಾವು ಮುಖ್ಯಮಂತ್ರಿ ಅವರ ಜತೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ. ನಗರಾಭಿವೃದ್ಧಿ ಖಾತೆಗೆ ಪಟ್ಟು ಹಿಡಿಸಿದ್ದ ಎಸ್.ಟಿ. ಸೋಮಶೇಖರ್ ಅವರಿಗೆ ಸಹಕಾರ ನೀಡಿ ಸಮಾಧಾನಪಡಿಸಲಾಗಿದೆ. ವಸತಿ ಸಹಕಾರ ಖಾತೆ ಮಹಾಮಂಡಲ ಅಧ್ಯಕ್ಷರಾಗಿ ಕೆಲಸ ಮಾಡಿದ್ದು, ಅವರಿಗೆ ಸಹಕಾರ ಇಲಾಖೆ ನೀಡಿ ಸಮಾಧಾನಪಡಿಸಿದ್ದಾರೆ.