ವೀರಾಜಪೇಟೆ, ಜ. 23: ಅನೇಕ ವರ್ಷಗಳಿಂದ ಅಭಿವೃದ್ಧಿ ಕಾಣದೆ ಜನ ಸಂಚಾರಕ್ಕೆ ತೊಡಕಾಗಿದ್ದ ವಿ. ಬಾಡಗ, ತೋತೇರಿ, ನಾಂಗಾಲ, ಬಿಟ್ಟಂಗಾಲ ಹಾಗೂ ಒಂದನೇ ರುದ್ರಗುಪ್ಪೆ ಮುಖ್ಯ ರಸ್ತೆಯನ್ನು ಇಲಾಖೆಯ ಮೂಲಕ ರೂ. 20 ಲಕ್ಷ ವೆಚ್ಚದಲ್ಲಿ ಡಾಮರೀಕರಣ ಮಾಡಿ ಗ್ರಾಮಸ್ಥರಿಗೆ ಸಹಕರಿಸಿದ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು.

ಈ ಸಂದರ್ಭ ಮಾತನಾಡಿದ ಗ್ರಾಮಸ್ಥರು, ಹೆಚ್ಚು ಮಳೆಯಾಗುವ ಈ ಪ್ರದೇಶದಲ್ಲಿ ರಸ್ತೆ ಕಿತ್ತು ಹೋಗುವುದು ಸಹಜ. ಎರಡು ವರ್ಷದಿಂದ ಬಿದ್ದ ಅಧಿಕ ಮಳೆಗೆ ಗ್ರಾಮಗಳ ರಸ್ತೆ ಸಂಪೂರ್ಣ ಹಾನಿಗೊಳಗಾಗಿದ್ದು ಸಂಚಾರಕ್ಕೆ ಯೋಗ್ಯವಾಗಿರಲಿಲ್ಲ. ಇದರಿಂದ ಸಾರ್ವಜನಿಕರಿಗೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಯಾಗಿತ್ತು. ಇದಕ್ಕಾಗಿ ನಾವು ಶಾಸಕರಿಗೆ ಮನವಿ ಸಲ್ಲಿಸಿದಾಗ ಗ್ರಾಮಸ್ಥರ ಬೇಡಿಕೆಯನ್ನು ಸ್ವಂದಿಸಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭ ವಿವಿಧ ಗ್ರಾಮಸ್ಥರ ಪರವಾಗಿ ಕಂಜಿತಂಡ ಮಂದಣ್ಣ, ಅಮ್ಮಣಿಚಂಡ ರಂಜು, ಕರ್ತಮಾಡ ಪೊನ್ನು ಮಣಿ ಮುಂತಾದ ಪ್ರಮುಖ ಗ್ರಾಮಸ್ಥರು ಉಪಸ್ಥಿತರಿದ್ದರು.