ಚೆಟ್ಟಳ್ಳಿ, ಜ. 23: ಈ ಬಾರಿ ದೆಹಲಿಯಲ್ಲಿ ನಡೆಯುವ ಎಪ್ಪತ್ತೊಂದನೇ ಗಣರಾಜ್ಯೋತ್ಸವದ ಎನ್.ಸಿ.ಸಿ. ಪೆರೇಡ್‍ಗೆ ಗೋಣಿಕೊಪ್ಪ ಕಾಪ್ಸ್ ಶಾಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕೋದಂಡ ನೀಲಾ ಸೋಮಣ್ಣ ಕರ್ನಾಟಕ ಗೋವಾ ಪ್ರಾಂತ್ಯದಿಂದ ಆಯ್ಕೆಯಾಗಿದ್ದಾಳೆ.

ಜೂನಿಯರ್ ಅಂಡರ್ ಆಫೀಸರ್ ಆಗಿರುವ ನೀಲ ಸೋಮಣ್ಣ ಬಾಳೆಲೆಯ ಕಾಫಿ ಬೆಳೆಗಾರರಾದ ರಶ್ಮಿ ಸೋಮಣ್ಣ ಮತ್ತು ಸಂಪನ್ ಸೋಮಣ್ಣ ಅವರ ಹಿರಿಯ ಪುತ್ರಿ.