*ಗೋಣಿಕೊಪ್ಪ, ಜ. 23: ವೀರಾಜಪೇಟೆ ತಾಲೂಕು ಬಿ.ಜೆ.ಪಿ ವತಿಯಿಂದ ಪೆÇನ್ನಂಪೇಟೆ ಪಟ್ಟಣದಲ್ಲಿ ಹಾಗೂ ಹುದಿಕೇರಿ ಗ್ರಾಮ ಪಂಚಾಯಿತಿಯ ಬೇಗೂರು, ಮಾಪಿಳೆತೋಡುವಿನಲ್ಲಿ ಅಂಗಡಿ ಮಳಿಗೆಗಳಿಗೆ ಭೇಟಿ ನೀಡಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನ ಜಾಗೃತಿ ಮೂಡಿಸಲಾಯಿತು.

ಅದ್ಯಕ್ಷ ನೆಲ್ಲಿರ ಚಲನ್ ಆವರು ಕಾಯ್ದೆ ಬಗ್ಗೆ ಗೊಂದಲದಲ್ಲಿರುವ ಸಾರ್ವಜನಿಕರಿಗೆ ಮಾಹಿತಿ ನೀಡಿ ಮನವರಿಕೆ ಮಾಡಿದರು. ನಿಕಟ ಪೂರ್ವ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ತಾಲೂಕು ಬಿಜೆಪಿ ಖಜಾಂಚಿ ಚೋಡುಮಾಡ ಶ್ಯಾಮ್ ಪೂಣಚ್ಚ, ವರ್ತಕರ ಪ್ರಕೋಷ್ಠದ ಸಂಚಾಲಕ ಚೆಪ್ಪುಡೀರ ಮಾಚಯ್ಯ, ಕೆ.ಬಿ.ವಿನು, ಕೆ.ಜಿ. ಪದ್ಮನಾಭ, ಮತ್ರಂಡ ಕಬೀರ್ ದಾಸ್, ಆಶಾ ಪ್ರಕಾಶ್, ರಜನಿ ದಿನೇಶ್‍ಬಾಬು, ರೇಖಾಶ್ರೀಧರ್, ಕಿರಣ್‍ಕುಮಾರ್, ಕಿಶನ್, ವಿನೀಶ್, ಸಂತೋಷ್, ಆರ್.ಎಂ.ಸಿ. ಸದಸ್ಯ ಅಜ್ಜಿಕುಟ್ಟೀರ ಪ್ರವೀಣ್, ಬೂತ್ ಅಧ್ಯಕ್ಷ ಮಂಡಚಂಡ ರಾಜಿ, ಚೋಡುಮಾಡ ವಿಕ್ಕಿ, ಮತ್ರಂಡ ರಾಜೇಂದ್ರ, ಚೆಂದೀರ ರಘು, ಕೇಚೆಟ್ಟಿರ ಅರುಣ್ ಅಲ್ಪಸಂಖ್ಯಾತ ಮುಖಂಡ ಉಮ್ಮರ್, ಐಮದೆ, ಸಾಮಾಜಿಕ ಜಾಲತಾಣದ ನಿರ್ವಾಹಕ ಚಟ್ಟಂಗಡ ಮಹೇಶ್ ಮಂದಣ್ಣ ಹಾಜರಿದ್ದರು.