ಗೋಣಿಕೊಪ್ಪ ವರದಿ, ಜ. 9: ಕುಟ್ಟದಲ್ಲಿ ಬಿಜೆಪಿ ವತಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿ ಕಾರ್ಯಕ್ರಮ ನಡೆಯಿತು. ಬಿಜೆಪಿ ತಾಲೂಕು ಅಧ್ಯಕ್ಷ ನೆಲ್ಲೀರ ಚಲನ್‍ಕುಮಾರ್ ನೇತೃತ್ವದಲ್ಲಿ ಅಲ್ಲಿನ ಅಂಗಡಿ-ಮಳಿಗೆಗಳಿಗೆ ತೆರಳಿ ಕಾಯ್ದೆಯ ಬಗ್ಗೆ ಗೊಂದಲ ನಿವಾರಿಸುವ ಪ್ರಯತ್ನ ಮಾಡಲಾಯಿತು. ಕಾಯ್ದೆಯಿಂದ ದೇಶಕ್ಕೆ ಹಾಗೂ ಜನಸಾಮಾನ್ಯರಿಗೆ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಲಾಯಿತು.

ಈ ಸಂದರ್ಭ ತಾಲೂಕು ಮಾಜಿ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ಕುಟ್ಟ ಸ್ಥಾನೀಯ ಸಮಿತಿ ಅಧ್ಯಕ್ಷ ಮುಕ್ಕಾಟೀರ ನವೀನ್, ಪಕ್ಷದ ಪ್ರಮುಖರಾದ ಹೊಟ್ಟೇಂಗಡ ರಮೇಶ್, ಶರೀನ್ ಸುಬ್ಬಯ್ಯ, ಮುಕ್ಕಾಟೀರ ಅರುಣ್, ಕಳ್ಳಂಗಡ ಕಾಳಪ್ಪ, ಸಚಿನ್ ಪೆಮ್ಮಯ್ಯ, ತೀತೀರ ಪ್ರತೀಶ್, ಮಂಜುನಾಥ್, ತೀತೀರ ದರ್ಶನ್, ಪೆಮ್ಮಣಮಾಡ ನವೀನ್, ಅನಿಲ್, ಪ್ರಜ್ವಲ್, ಕೀರ್ತಿ, ಅನೀಶ್, ವಿಶ್ವ, ಜನಾರ್ಧನ್ ಇತರರಿದ್ದರು.