ಶನಿವಾರಸಂತೆ, ಜ. 8: ಕೊಡ್ಲಿಪೇಟೆ ಹೋಬಳಿಯ ಬೆಂಬಳೂರು-ಶಿವರಳ್ಳಿ-ಊರುಗುತ್ತಿ ಗ್ರಾಮ (ಕ್ಯಾತೆ) ಸಂಬಂಧಿಸಿದಂತೆ ತಾ. 16 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5.30 ರವರೆಗೆ ಇತಿಹಾಸ ಪ್ರಸಿದ್ಧ ಬಾಣಂತಮ್ಮ ಮತ್ತು ಕುಮಾರಲಿಂಗೇಶ್ವರ ಜಾತ್ರೆ ನಡೆಯಲಿದೆ. ಈ ಜಾತ್ರೆಗೆ ಪೂರಕವಾಗಿ ತಾ. 15 ರಿಂದ ಮಡೆ ಪೂಜೆಗಾಗಿ ಗ್ರಾಮದ ಪಟೇಲರ ಮನೆಯಲ್ಲಿ ಬೆಳಗಿನಿಂದ ಸಂಜೆಯವರೆಗೆ ದವಸ, ದಾನ್ಯ, ಹಣ್ಣು, ತರಕಾರಿಗಳನ್ನು ಸ್ವೀಕರಿಸಲಾಗುವುದು. ಸಂಜೆ 9.30 ಕ್ಕೆ ಮಡೆಪೂಜೆ ನಡೆಯುತ್ತದೆ.
ಸಂಜೆ 5 ಗಂಟೆಯಿಂದ 8 ಗಂಟೆಯ ಒಳಗಡೆ ಶ್ರೀ ಬಾಣಂತಮ್ಮ ಕುಮಾರಲಿಂಗೇಶ್ವರ ದೇವರ ಗಂಗಾಸ್ನಾನ, ಅಡುಗೆ ಒಲೆ ಪೂಜೆ ನಡೆಯುತ್ತದೆ. ರಾತ್ರಿ 9.30 ಕ್ಕೆ ಮಡೆ ಪೂಜೆ ನಡೆಯುತ್ತದೆ. ನಂತರ ಗ್ರಾಮಸ್ಥರು ಮತ್ತು ಭಕ್ತಾದಿಗಳೊಡಗೂಡಿ ಮೆರವಣಿಗೆಯಲ್ಲಿ ಮಡೆಯನ್ನು ಅಡುಗೆ ಒಲೆ ಹತ್ತಿರ ಕೊಂಡೊಯ್ಯಲಾಗುವುದು. ಮಾರನೇ ದಿನ ಬೆಳಿಗ್ಗೆ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಜಾತ್ರಾ ಸಮಿತಿಯ ಆಡಳಿತ ಮಂಡಳಿ ತಿಳಿಸಿದೆ.