ಮೂರ್ನಾಡು, ಡಿ. 26: ಮೂರ್ನಾಡು ಸಮೀಪದ ಗಾಂಧೀನಗರದ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ದೇವಸ್ಥಾನದ ಸಂಸ್ಥಾಪಕ ಮಹಾಬಲೇಶ್ವರ ಗಾಂವ್ಕರ್ ರಚಿಸಿದ “ಜ್ಯೋತಿಷ್ಯ ಸಾಂತ್ವನ-2020” ಪುಸ್ತಕವನ್ನು ಸಾಹಿತಿ ಕಿಗ್ಗಾಲು ಗಿರೀಶ್ ಲೋಕಾರ್ಪಣೆ ಮಾಡಿದರು.
ಕಿಗ್ಗಾಲು ಗಿರೀಶ್ ಅವರನ್ನು ಈ ವೇಳೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಹಾಬಲೇಶ್ವರ ಗಾಂವ್ಕರ್, ಗ್ರೇಸಿ ವಿಜಯ, ರಂಜಿತ್ ಕಿಗ್ಗಾಲ್, ಗೌರಮ್ ಮತ್ತಿತರು ಉಪಸ್ಥಿತರಿದ್ದರು.
ಹೇಮಾವತಿ ಶಾಂತರಾಜ್ ಸ್ವಾಗತಿಸಿ, ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷ ಪಿ.ಪಿ. ಸುಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಜಯಂತಿ ವಂದಿಸಿದರು.