ಮಡಿಕೇರಿ, ಡಿ. 20: ಬೆಂಗಳೂರಿನಲ್ಲಿ ವಾಸವಿರುವ ಕೊಡಗಿನ ಕಿಗ್ಗಟ್ಟ್‍ನಾಡ್ ವ್ಯಾಪ್ತಿಗೆ ಒಳಪಟ್ಟ ಗ್ರಾಮಗಳ ಸದಸ್ಯರುಗಳನ್ನು ಒಳಗೊಂಡಂತೆ ರಚನೆಯಾಗಿರುವ ಕಿಗ್ಗಟ್ಟ್‍ನಾಡ್ ಕೊಡವ ಸಂಘದ ವತಿಯಿಂದ ಪ್ರಥಮ ನಾಡೊರ್ಮೆ ಕಾರ್ಯಕ್ರಮ ತಾ. 22 ರಂದು ಬೆಂಗಳೂರು ಕೊಡವ ಸಮಾಜದ ಅಪ್ಪಚ್ಚಕವಿ ಸಭಾಂಗಣದಲ್ಲಿ ನಡೆಯಲಿದೆ.

ಅತಿಥಿಗಳಾಗಿ ಕೊಡವ ಸಮಾಜ ಒಕ್ಕೂಟದ ಹಾಗೂ ಬೆಂಗಳೂರು ಸಮಾಜದ ಮಾಜಿ ಅಧ್ಯಕ್ಷ ಮಲ್ಲೇಂಗಡ ದಾದಾ ಬೆಳ್ಯಪ್ಪ, ಚೆಪ್ಪುಡೀರ ತಿಲಕ್ ಸುಬ್ಬಯ್ಯ, ಹಾಲಿ ಉಪಾಧ್ಯಕ್ಷೆ ಮಲ್ಲೇಂಗಡ ಮೀರ ಜಲಜಕುಮಾರ್, ಕಾರ್ಯದರ್ಶಿ ಚಿರಿಯಪಂಡ ಸುರೇಶ್ ನಂಜಪ್ಪ ಪಾಲ್ಗೊಳ್ಳಲಿದ್ದಾರೆ. ಸಾಂಸ್ಕøತಿಕ ಪ್ರದರ್ಶನ ಸೇರಿದಂತೆ ಸಭಾ ಕಾರ್ಯಕ್ರಮ ಬೆಕ್ಕೆಸೊಡ್ಲೂರುವಿನ ಮಂದತವ್ವ ಟ್ರಸ್ಟ್‍ನಿಂದ ಸಾಂಸ್ಕøತಿಕ ಕಾರ್ಯಕ್ರಮ, ಕೊಡವ ಆರ್ಕೆಸ್ಟ್ರಾ, ನಾಟಕ ಮತ್ತಿತರ ಕಾರ್ಯಕ್ರಮಗಳು ಅಂದು ಜರುಗಲಿವೆ.