ಮಡಿಕೇರಿ, ಡಿ.13: ಜಿಲ್ಲೆಯಲ್ಲಿನ ಅಪೌಷ್ಟಿಕ ಮಕ್ಕಳನ್ನು ಪತ್ತೆ ಹಚ್ಚಿ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿರುವ ‘ಪೌಷ್ಟಿಕ ಪುನ:ಶ್ಚೇತನ ಕೇಂದ್ರ’ಕ್ಕೆ (ಎನ್ಆರ್ಸಿ) ಸೇರಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸುವಂತಾಗಬೇಕು ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಿ.ಜಿ.ಹಸಬಿ ನಿರ್ದೇಶನ ಮಡಿಕೇರಿ, ಡಿ.13: ಜಿಲ್ಲೆಯಲ್ಲಿನ ಅಪೌಷ್ಟಿಕ ಮಕ್ಕಳನ್ನು ಪತ್ತೆ ಹಚ್ಚಿ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿರುವ ‘ಪೌಷ್ಟಿಕ ಪುನ:ಶ್ಚೇತನ ಕೇಂದ್ರ’ಕ್ಕೆ (ಎನ್ಆರ್ಸಿ) ಸೇರಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸುವಂತಾಗಬೇಕು ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಿ.ಜಿ.ಹಸಬಿ ನಿರ್ದೇಶನ ಮಾತನಾಡಿದರು. ಪ್ರತಿಯೊಬ್ಬರಿಗೂ ಆಹಾರ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಹಸಿವು ಮುಕ್ತ ರಾಷ್ಟ್ರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ 7 ಕೆ.ಜಿ. ಅಕ್ಕಿ ವಿತರಿಸುತ್ತಿದೆ. ಆದರೂ ಅಲ್ಲಲ್ಲಿ ಅಪೌಷ್ಟಿಕತೆಗೆ ತುತ್ತಾಗಿರುವ ಮಕ್ಕಳು ಕಂಡುಬರುತ್ತಿದ್ದು, ಇಂತಹ ಮಕ್ಕಳನ್ನು ಇತರ ಮಕ್ಕಳಂತೆ ಆರೋಗ್ಯ ಯುತವಾಗಿ
(ಮೊದಲ ಪುಟದಿಂದ) ಕಾಪಾಡುವಂತಾಗಲು ‘ಪೌಷ್ಟಿಕ ಪುನಃಶ್ಚೇತನ ಕೇಂದ್ರ’ಗಳನ್ನು ತೆರೆಯಲಾಗಿದ್ದು, ಇದನ್ನು ಬಳಸಿಕೊಳ್ಳುವಂತಾಗಬೇಕು ಎಂದು ಸಲಹೆ ಮಾಡಿದರು.
ವಿಶ್ವದ 197 ರಾಷ್ಟ್ರಗಳಲ್ಲಿ ಭಾರತ 107 ನೇ ಸ್ಥಾನದಲ್ಲಿದ್ದು, ನೆರೆ ರಾಷ್ಟ್ರಗಳ ಸಾಲಿನಲ್ಲಿದೆ. ಯಾರೂ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಆಹಾರ ಭದ್ರತಾ ಕಾಯ್ದೆಯನ್ನು ಸರ್ಕಾರ ಜಾರಿಗೊಳಿಸಿದೆ ಎಂದು ತಿಳಿಸಿದರು.
ನ್ಯಾಯಬೆಲೆ ಅಂಗಡಿಗಳು, ವಿದ್ಯಾರ್ಥಿ ನಿಲಯಗಳು ಹಾಗೂ ಅಂಗನವಾಡಿಗಳಿಗೆ ಸರ್ಕಾರ ಸಹಾಯಧನದಡಿ ಆಹಾರ ಪೂರೈಸುತ್ತಿದೆ. ಈ ಆಹಾರ ಸಮರ್ಪಕವಾಗಿ ತಲುಪಬೇಕು. ಆಹಾರ ಪದಾರ್ಥಗಳು ಗುಣಮಟ ್ಟದಿಂದ ಕೂಡಿರಬೇಕು. ಎಷ್ಟು ಬೇಕು ಅಷ್ಟನ್ನೂ ಮಾತ್ರ ಪೂರೈಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಗೋದಾಮಿನಲ್ಲಿ ಕೊಳೆಯುವಂತಾಗ ಬಾರದು ಎಂದು ಸೂಚಿಸಿದರು.
ಈಗಾಗಲೇ ಜಿಲ್ಲೆಯ ಮೂರು ತಾಲೂಕಿನ ಹಲವು ಕಡೆಗಳಲ್ಲಿರುವ ನ್ಯಾಯಬೆಲೆ ಅಂಗಡಿಗಳು, ವಿದ್ಯಾರ್ಥಿ ನಿಲಯಗಳು, ಅಂಗನವಾಡಿ ಕೇಂದ್ರಗಳು, ಎಂಎಸ್ಪಿಟಿಸಿ ಕೇಂದ್ರಗಳು ಮತ್ತಿತರ ಕಡೆಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಹಾಗೂ ಲೆಕ್ಕಪತ್ರ ನಿರ್ವಹಣೆಯನ್ನು ಪರಿಶೀಲಿಸ ಲಾಗಿದೆ. ಕೆಲವೊಂದು ಕಡೆ ಉತ್ತಮ ರೀತಿಯಲ್ಲಿದ್ದು, ಇನ್ನೂ ಕೆಲವು ಕಡೆ ಸುಧಾರಣೆಯಾಗಬೇಕಿದೆ ಎಂದು ಹೇಳಿದರು.
ಕೊಡಗು ಜಿಲ್ಲೆ ಸೇರಿದಂತೆ ಈಗಾಗಲೇ ರಾಜ್ಯದ 23 ಜಿಲ್ಲೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸ ಲಾಗಿದೆ. ಇದೇ ತಾ.23ರಂದು ರಾಜ್ಯ ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಯಲಿದ್ದು, ನಂತರ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ತಿಳಿಸಿದರು.
ಸದಸ್ಯ ಮಹಮ್ಮದ್ ಅಲಿ ಮಾತನಾಡಿ ಮಧ್ಯಾಹ್ನದ ಬಿಸಿ ಊಟ ಯೋಜನೆ, ವಿದ್ಯಾರ್ಥಿ ನಿಲಯ ಹಾಗೂ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು, ಈ ಸಂಬಂಧ ಅನುಪಾಲನಾ ವರದಿ ಯನ್ನು ಸಂಬಂಧಪಟ್ಟ ಅಧಿಕಾರಿ ಗಳು ನೀಡುವಂತೆ ಸೂಚಿಸಿದರು.
ಸರ್ಕಾರದಿಂದ ಒದಗಿಸ ಲಾಗುವ ಆಹಾರ ಅರ್ಹರಿಗೆ ತಲುಪಬೇಕು. ಜಿಲ್ಲೆಯಲ್ಲಿ ಸುಮಾರು 365 ಕ್ವಿಂಟಾಲ್ ಅಕ್ಕಿ ಎತ್ತುವಳಿ ಯಾಗಿದೆ. ಅಕ್ಕಿ ಬಳಕೆಯಾಗುತ್ತದೆ. ಆದರೆ 198 ಕ್ವಿಂಟಾಲ್ ಗೋಧಿ ಎತ್ತುವಳಿಯಾಗಿಲ್ಲ ಎಂದು ಹೇಳಿದರು.
ಮತ್ತೊಬ್ಬ ಸದಸೆÀ್ಯ ಮಂಜುಳಾ ಮಾತನಾಡಿ ಹಲವು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು, ಎರಡು ತಿಂಗಳಿಗೊಮ್ಮೆ ತಾಯಂದಿರ ಸಭೆ ನಡೆಸಬೇಕು. ಬಡವರಿಗೆ ಸರ್ಕಾರದ ಆಹಾರ ಭದ್ರತಾ ಸಹಾಯಧನ ತಲುಪಿಸಬೇಕು ಎಂದು ಸಲಹೆ ಮಾಡಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ ಆಸ್ಪತ್ರೆ ಗಳಲ್ಲಿರುವ ಪೌಷ್ಟಿಕ ಪುನಃಶ್ಚೇತನ ಕೇಂದ್ರಕ್ಕೆ ವಿವಿಧ ಕಾರಣಗಳಿಂದ ಮಕ್ಕಳನ್ನು ಕರೆತರುತ್ತಿಲ್ಲ ಎಂದು ಹೇಳಿದರು.
ನಷ್ಟದಲ್ಲಿ ಎಂಎಸ್ಪಿಟಿಸಿ ಕೇಂದ್ರಗಳು: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಸಬಿ ಅವರು ಜಿಲ್ಲೆಯಲ್ಲಿರುವ ಎರಡು ಎಂಎಸ್ ಪಿಟಿಸಿ ಕೇಂದ್ರಗಳು ನಷ್ಟದಲ್ಲಿ ನಡೆಯುತ್ತಿದ್ದು, ಇವುಗಳು ಸುಧಾರಣೆ ಯಾಗಬೇಕಿದೆ ಎಂದು ಹೇಳಿದರು.
ಸರ್ಕಾರದ ಸಹಾಯಧನದಡಿ ನ್ಯಾಯಬೆಲೆ ಅಂಗಡಿ, ವಿದ್ಯಾರ್ಥಿ ನಿಲಯ, ಅಂಗನವಾಡಿ ಕೇಂದ್ರಗಳಿಗೆ ದೊರೆಯುವ ಆಹಾರ ಪದಾರ್ಥ ಗಳು ಸಮರ್ಪಕವಾಗಿ ತಲುಪಬೇಕು. ಆ ನಿಟ್ಟಿನಲ್ಲಿ ಪರಿಶೀಲಿಸಿ ಮೇಲ್ವಿಚಾರಣೆ ಮಾಡಿ, ಸರ್ಕಾರಕ್ಕೆ ವರದಿ ನೀಡುವುದು ಆಯೋಗದ ಉದ್ದೇಶವಾಗಿದೆ ಎಂದು ತಿಳಿಸಿದರು.
ಆಹಾರ ಪದಾರ್ಥಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸಬೇಕು. ಆದರೆ ಎಂಎಸ್ಪಿಟಿಸಿ ಕೇಂದ್ರಗಳಲ್ಲಿ ವೈಜ್ಞಾನಿಕವಾಗಿ ಆಹಾರ ಪದಾರ್ಥವನ್ನು ಸಂಗ್ರಹಣೆ ಮಾಡುತ್ತಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು.
ನ್ಯಾಯಬೆಲೆ ಅಂಗಡಿಗಳಲ್ಲಿ ಕಡ್ಡಾಯವಾಗಿ ಆಹಾರ ಪದಾರ್ಥ ಗಳನ್ನು ಪಡಿತರ ಚೀಟಿದಾರರಿಗೆ ತಲುಪಿಸಬೇಕು ಎಂದು ಸೂಚಿಸಿದರು.
ಮಹಮ್ಮದ್ ಅಲಿ ಮಾತನಾಡಿ ಕೊಡಗು ಜಿಲ್ಲೆ ಬೆಟ್ಟಗುಡ್ಡಗಳಿಂದ ಕೂಡಿದ್ದು, ಭೌಗೋಳಿಕವಾಗಿ ವಿಭಿನ್ನತೆ ಹೊಂದಿದೆ. ಸರ್ಕಾರದ ಯೋಜನೆಗಳನ್ನು ಪ್ರತ್ಯೇಕ ಮಾನದಂಡ ನಿಗದಿಮಾಡಬೇಕಿದೆ. ಆ ನಿಟ್ಟಿನಲ್ಲಿ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದರು. ಸದಸೆÀ್ಯ ಮಂಜುಳಾ ಇದ್ದರು.
ಅಹವಾಲು ಸ್ವೀಕಾರ: ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಿ.ಜಿ.ಹಸಬಿ ಅವರು ನಗರದ ಜಿ.ಪಂ. ಕೆ.ಡಿ.ಪಿ. ಸಭಾಂಗಣದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಸಂಬಂಧಿಸಿದಂತೆ ಆಹಾರ ಭದ್ರತಾ ಕಾಯ್ದೆಯ ವಿವಿಧ ಯೋಜನೆಗಳ ಅನುಷ್ಠಾನ ಸಂಬಂಧ ಸಾರ್ವಜನಿಕ ರಿಂದ ಅಹವಾಲು ಸ್ವೀಕರಿಸಿದರು.