ಸೋಮವಾರಪೇಟೆ, ನ. 17: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು ಜಿಲ್ಲಾ ಯುವ ಒಕ್ಕೂಟ ಹಾಗೂ ಪೊನ್ನಂಪೇಟೆಯ ನಿಸರ್ಗ ಯುವತಿ ಮಂಡಳಿ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಯುವಜನ ಮೇಳದಲ್ಲಿ ಸೋಮವಾರಪೇಟೆಯ ಗಂಧರ್ವ ಯುವಕ ಸಂಘ ಸಮಗ್ರ ಪ್ರಶಸ್ತಿಯೊಂದಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.
ಸಂಘದ ಟಿ.ಜೆ. ಪ್ರವೀಣ್ಕುಮಾರ್ ಅವರು ಲಾವಣಿಯಲ್ಲಿ ಪ್ರಥಮ, ಏಕಪಾತ್ರಾಭಿನಯದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ರಂಗಗೀತೆಯಲ್ಲಿ ಹೆಚ್.ಕೆ. ಮಹೇಶ್ (ದ್ವಿ) ಸ್ಥಾನ ಪಡೆದಿದ್ದಾರೆ. ಗುಂಪು ಸ್ಪರ್ಧೆಯ ಜಾನಪದ ಗೀತೆ ಮತ್ತು ಭಜನೆ ವಿಭಾಗದಲ್ಲಿ ಸದಸ್ಯರಾದ ಹೆಚ್.ಪಿ. ವಿಜಯಕುಮಾರ್, ಟಿ.ಜೆ. ಪ್ರವೀಣ್ಕುಮಾರ್, ಡಿ.ಪಿ. ಸತೀಶ್, ವಿನಯಕುಮಾರ್, ಶಿವಕುಮಾರ್, ಕುಶಾಲಪ್ಪ, ಅಭಿಷೇಕ್, ಹೆಚ್.ಕೆ. ಮಹೇಶ್, ಪ್ರಸನ್ನ ಇವರುಗಳು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.