ಹೌದು ! ಸರಗಳ್ಳತನ, ಮನೆಗಳ್ಳತನದಂತಹ ಕಳ್ಳತನ ಪ್ರಕರಣಗಳಾಲೀ ದರೋಡೆ ಡಕಾಯಿತಿಗಳಾಗಲೀ ಆದಾಗ, ಅಕ್ಕ-ಪಕ್ಕದ ಮನೆಯವರ ಜೊತೆಗೆ ಜಗಳಗಳಾದಾಗ, ಸಾರ್ವಜನಿಕ ಸ್ಥಳಗಳಲ್ಲಿ ರೌಡಿಗಳ ಹೊಡೆದಾಟ ಕದನಗಳು ನಡೆದಾಗ, ಎಲ್ಲಾದರೂ ಆತ್ಮಹತ್ಯೆ ಅಥವಾ ಕೊಲೆ ಪ್ರಕರಣಗಳು ಘಟಿಸಿದಾಗ ೧೦೦ ಸಂಖ್ಯೆಗೆ ದೂರವಾಣಿ ಕರೆ ಮಾಡುವಂತಿಲ್ಲ !! ಅದೇ ರೀತಿ, ಅಗ್ನಿ ಅವಗಡಗಳು ಸಂಭವಿಸಿದಾಗ ೧೦೧ ಸಂಖ್ಯೆಗೆ ಕರೆ ಮಾಡುವದೂ ಬೇಡ !! ಅಂತೆಯೇ, ಅಪಘಾತಗಳಾದಾಗ ಗಾಯಾಳುಗಳನ್ನು ಆಸ್ಪತೆಗೆ ಸಾಗಿಸಲು ೧೦೮ ಸಂಖ್ಯೆಗೆ ಡಯಲ್ ಮಾಡುವ ಅವಶ್ಯಕತೆಯೂ ಇಲ್ಲ !! ಇವೆಲ್ಲಕ್ಕೂ ಒಂದೇ ಪರಿಹಾರ ದೂರವಾಣಿ ಸಂಖ್ಯೆ : ೧೧೨.

ತುರ್ತು ಸ್ಪಂದನಾ ಸಹಾಯ ವ್ಯವಸ್ಥೆಯ ಡಯಲ್ ೧೧೨ ಚಾಲನೆ ನೀಡಿ, ವೆಬ್ ಪೋರ್ಟಲ್ ಞಚಿ. ಟಿeಡಿs.iಟಿ ಲೋಕಾರ್ಪಣೆ ಮಾಡಿ ಹಾಗೂ ಬಳಕೆದಾರರ ಕೈಪಿಡಿಯನ್ನು ಬಿಡುಗಡೆ ಮಾಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಮಾತನಾಡಿ ಇಂದಿನಿAದ ದೂರವಾಣಿ ಸಂಖ್ಯೆ : ೧೦೦, ೧೦೧ ಹಾಗೂ ೧೦೮ ಸಂಖ್ಯೆಗಳನ್ನು ಮಿಳಿಗೊಳಿಸಿ ತುರ್ತು ಸ್ಪಂದನಾ ಸಹಾಯ ವ್ಯವಸ್ಥೆಯ ಹೆಸರಿನಲ್ಲಿ ಹೊಸ ದೂರವಾಣಿ ಸಂಖ್ಯೆ ೧೧೨ ಅಸ್ತಿತ್ವಕ್ಕೆ ಬಂದಿದೆ. ರಾಷ್ಟಾçದ್ಯಂತ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾಲಕ್ಕೆ ಜಾರಿಗೆ ಬಂದಿರುವ ಈ ಕೇಂದ್ರೀಕೃತ ವ್ಯವಸ್ಥೆಯಲ್ಲಿ ೧೧೨ ಸಂಖ್ಯೆಗೆ ಡಯಲ್ ಮಾಡಿದಾಗ ಕರೆ ಮಾಡಿದ ವ್ಯಕ್ತಿ ಯಾವದೇ ಸ್ಥಳ ಅಥವಾ ಪ್ರದೇಶದಲ್ಲಿದ್ದರೂ ಅದನ್ನು ಗುರುತಿಸಿ ದೂರುದಾರರು ಅಥವಾ ವಿನಂತಿದಾರರ ಮನವಿಗೆ ತುರ್ತು ಸ್ಪಂದನೆ ಲಭಿಸಲಿದೆ. ಕರೆದಾರರು ಅಥವಾ ವಿನಂತಿದಾರರಿಗೆ ಪ್ರತಿಕ್ರಿಯೆದಾರರು ಅತಿ ಕ್ಷಿಪ್ರವಾಗಿ ಆ ಪ್ರದೇಶಕ್ಕೆ ಸಮೀಪದಲ್ಲಿ ಲಭ್ಯವಿರುವ ಪೊಲೀಸರ ನೆರವು, ಅಗ್ನಿ ಶಾಮಕರ ಸಹಾಯ ಅಥವಾ ಆಂಬುಲೆನ್ಸ್ನ ಸೇವೆ ದೊರಕಿಸಿಕೊಡಲಿದ್ದಾರೆ ಎಂದರು.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೀ ಯೋಜನೆಗಳಲ್ಲೊಂದಾದ ೧೩.೭ ಕೋಟಿ ರೂ ಮೊತ್ತದ ಈ ಯೋಜನೆಗೆ ಕೇಂದ್ರ ಸರ್ಕಾರವು ೧೦ ಕೋಟಿ ರೂ ಅನುದಾನ ಬಿಡುಗಡೆ ಮಾಡಿದೆ. ಉಳಿದ ಮೊತ್ತವನ್ನು ರಾಜ್ಯ ಸರ್ಕಾರ ಭರಿಸಲಿದೆ. ಸಂಕಷ್ಟಕ್ಕೆ ಸಿಲುಕಿದವರು ದಿನದ ೨೪ ಗಂಟೆಗಳೂ ಹಾಗೂ ವರ್ಷದ ೩೬೫ ದಿನಗಳೂ ಯಾವದೇ ಸಮಯದಲ್ಲಿ ಧ್ವನಿ, ಎಸ್ ಎಂ ಎಸ್, ಇ-ಮೇಲ್ ಹಾಗೂ ಪೋರ್ಟಲ್ ಮಾತ್ರವಲ್ಲದೆ, ೧೧೨ ಇಂಡಿಯಾ ಆಪ್ ಅಥವಾ ಮೊಬೈಲ್‌ನ ಪವರ್ ಬಟನ್ ಮೂರು ಬಾರಿ ಒತ್ತಿ ಪ್ಯಾನಿಕ್ ಆಪ್ ಮೂಲಕವೂ ಸಹಾಯಕ್ಕೆ ಮೊರೆ ಹೋಗಬಹುದಾಗಿದೆ ಎಂದು ವಿವರಿಸಿದರು.

ಈ ದಿನ ೧೮೩ ತುರ್ತು ಸ್ಪಂದನಾ ವಾಹನಗಳನ್ನು ರಾಜ್ಯಕ್ಕೆ ಸಮರ್ಪಿಸಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ವಾಹನಗಳ ಸಂಖ್ಯೆಯನ್ನು ೫೦೦ ಕ್ಕೆ ಹೆಚ್ಚಿಸಲು ಯೋಜಿಸಲಾಗಿದೆ. ರಾಜ್ಯದ ರಾಜಧಾನಿ ಬೆಂಗಳೂರಿಗೆ ೧೦೦ ವಾಹನಗಳನ್ನು ಒದಗಿಸಲು ಮುಂದಿನ ಆಯವ್ಯಯದಲ್ಲಿ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ, ಈ ವ್ಯವಸ್ಥೆ ದುರುಪಯೋಗವಾಗದಂತೆ ಕಟ್ಟೆಚ್ಚರವಹಿಸಲು ಪೊಲೀಸರಿಗೆ ಕಿವಿಮಾತು ಹೇಳಿದರು.

ಈ ಮುನ್ನ ರಾಜ್ಯ ಪೊಲೀಸ್ ಮಹಾ ನಿರ್ದೇಶಕರೂ ಹಾಗೂ ಮಹಾ ನಿರೀಕ್ಷಕರೂ ಆದ ನೀಲಮಣಿ ಎನ್ ರಾಜು ಅವರು ಅಪರಾಧಗಳ ಸಂಖ್ಯೆಯನ್ನು ಕಡಿಮೆ ಮಾಡಲು ನೆರವಾಗುವ ಈ ಯೋಜನೆ ಅಪರಾಧಗಳ ವಿಶ್ಲೇಷಣೆಗೂ ಹಾಗೂ ಪೊಲೀಸರ ಸ್ಪಂದನಾ ಕಾರ್ಯಚಟುವಟಿಕೆಗಳ ಮೇಲೆ ನಿಗಾ ಇಡಲೂ ಕೂಡಾ ಅತ್ಯಂತ ಅನುಕೂಲವಾಗಲಿದೆ. ಎಂದು ತಮ್ಮ ಸ್ವಾಗತ ಭಾಷಣದಲ್ಲಿ ತಿಳಿಸಿದರು. ಅಲ್ಲದೆ, ಈ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಇನ್ನಷ್ಟು ಮಾನವ ಸಂಪನ್ಮೂಲ, ಮತ್ತಷ್ಟು ವಾಹನಗಳು ಜೊತೆಗೆ ಕಾಲಾವಕಾಶದ ಅಗತ್ಯವಿದೆ

ಸಂವಹನ, ವ್ಯವಸ್ಥಾಪನ ಹಾಗೂ ಆಧುನೀಕರಣ ವಿಭಾಗದ ಅಪರ ಪೊಲೀಸ್ ಮಹಾನಿರ್ದೇಶಕ ಡಾ ರಾಜ್ವೀರ್ ಪ್ರತಾಪ್ ಶರ್ಮಾ ಅವರು ಡಯಲ್ ೧೧೨ ಯೋಜನೆಗೆ ಜನರಿಗೆ ಪರಿಚಯವಾಗುವವರೆಗೂ ಕೆಲಕಾಲ ತುರ್ತು ಕರೆಗೆ ಮೀಸಲಿರುವ ೧೦೦, ೧೦೧ ಹಾಗೂ ೧೦೮ ಮುಂದುವರೆಸಲು ಚಿಂತಿಸಲಾಗಿದೆ ಎಂದರಲ್ಲದೆ, ಸಾರ್ವಜನಿಕ ಸುರಕ್ಷತೆಗೆ ಆದ್ಯತೆ ನೀಡುವ ಈ ಯೋಜನೆಯನ್ನು ಇತರೆ ರಾಜ್ಯಗಳಲ್ಲಿ ಹಂತ ಹಂತವಾಗಿ ಜಾರಿಗೊಳಿಸಲಾಗುತ್ತಿದೆ. ಕರ್ನಾಟಕದಲ್ಲಿ ಮಾತ್ರ ಏಕಕಾಲಕ್ಕೆ ರಾಜ್ಯಾದ್ಯಂತ ಈ ಯೋಜನೆಗೆ ಚಾಲನೆ ದೊರೆತಿದೆ ಎಂದು ಅಭಿಮಾನಪೂರ್ವಕವಾಗಿ ನುಡಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಒಳಾಡಳಿತ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ ರಜನೀಶ್ ಗೋಯಲ್, ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಮಾರಂಭದಲ್ಲಿ ಹಾಜರಿದ್ದರು.

-ಡಿ.ಪಿ.ಎಂ.