ಮಡಿಕೇರಿ, ಅ. 23: ಕೂರ್ಗ್ ಟೇಬಲ್ ಟೆನ್ನಿಸ್ ಪಂದ್ಯಾವಳಿಯ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಕೂರ್ಗ್ ಟೇಬಲ್ ಟೆನ್ನಿಸ್ ಅಸೋಸಿಯೇಶನ್ ಅಧ್ಯಕ್ಷ ಮೊಹಮ್ಮದ್ ಆಸೀಫ್ ಹಾಗೂ ಪ್ರಧಾನ ಕಾರ್ಯದರ್ಶಿ ಮಲ್ಲೇಂಗಡ ರಚನ್ ಪೊನ್ನಪ್ಪ, ಎನ್‍ಎಲ್‍ಎನ್ ಗ್ರೂಪ್ ಕಂಪೆನಿಯ ಚೇರ್‍ಮೇನ್ ಸಾತಪ್ಪನ್, ರೋಟರಿ ಅದ್ಯಕ್ಷ ರತನ್ ತಮ್ಮಯ್ಯ, ಕಾರ್ಯದರ್ಶಿ ಕೆ.ಸಿ. ಕಾರ್ಯಪ್ಪ ಮತ್ತಿತರರು ಉಪಸ್ಥಿತರಿದ್ದರು.

ಏ ಟೂ ಜೇಡ್ ಸೂಪರ್ ಮಾರ್ಕೇಟ್‍ನ ಮಾಲೀಕ ಮೊಹಮ್ಮದ್ ನಾಸೀರ್, ಮುಳಿಯ ಜ್ಯುವೆಲ್ಲರ್ಸ್‍ನ ಮ್ಯಾನೇಜಿಂಗ್ ಡೈರೆಕ್ಟರ್ ಕೇಶವ ಪ್ರಸಾದ್ ಕ್ರೀಡೆಯ ಮಹತ್ವವನ್ನು ತಿಳಿಸಿದರು. ಮೈಸೂರಿನ ಡಾ. ಎಂ.ಜಿ. ಪಾಲ್ಕಾರ್, ರೋಟರಿ ಕಾರ್ಯದರ್ಶಿ ಕೆ.ಸಿ. ಕಾರ್ಯಪ್ಪ, ಕೂರ್ಗ್ ಟೇಬಲ್ ಟೆನ್ನಿಸ್ ಅಸೋಸಿಯೇಶನ್ ಅಧ್ಯಕ್ಷ ಮೊಹಮ್ಮದ್ ಆಸೀಫ್ ಇತರರು ಇದ್ದರು.

ಸ್ಪರ್ಧೆಯಲ್ಲಿ ವಿಜೇತರ ವಿವರ: ಜೂನಿಯರ್ ವಿಭಾಗದಲ್ಲಿ 14 ವರ್ಷದೊಳಗಿನ ಹುಡುಗರು ಸಹದ್ (ಪ್ರಥಮ), ಪ್ರಥ್ವಿನ್ (ದ್ವಿತೀಯ), ಜೂನಿಯರ್ ವಿಭಾಗದಲ್ಲಿ ಎ14 ವರ್ಷದೊಳಗಿನ ಹುಡುಗಿಯರು ತನ್ವಿಕ (ಪ್ರಥಮ), ಲಕ್ಷ್ಮಿ (ದ್ವಿತೀಯ).

ಜೂನಿಯರ್ ಡಬಲ್ಸ್ ವಿಭಾಗದಲ್ಲಿ 21 ವರ್ಷದೊಳಗಿನ ಹುಡುಗಿಯರಿಗೆ ಅನುಷ (ಪ್ರಥಮ), ಪೂವಮ್ಮ (ಪ್ರಥಮ) ಪೂರ್ವಿ (ದ್ವಿತೀಯ) ತನ್ವಿಕ (ದ್ವಿತೀಯ). ಜೂನಿಯರ್ ಹುಡುಗರ ಡಬಲ್ಸ್ ವಿಭಾಗದಲ್ಲಿ ಬಿದ್ದಪ್ಪ (ಪ್ರಥಮ), ಚೇತನ್ (ಪ್ರಥಮ), ಪ್ರಥ್ವೇನ್ (ದ್ವಿತೀಯ), ಜಶ್ವಂತ್ (ದ್ವಿತೀಯ).

ಜೂನಿಯರ್ ಹುಡುಗಿಯರ ವಿಭಾಗದಲ್ಲಿ ಪೂವಮ್ಮ(ಪ್ರಥಮ), ಅನುಷ(ದ್ವಿತೀಯ), ಜೂನಿಯರ್ ಹುಡುಗರ ವಿಭಾಗದಲ್ಲಿ ಪ್ರಜ್ವಲ್ (ಪ್ರಥಮ) ಹಾಗೂ ಚೇತನ್ (ದ್ವಿತೀಯ).

ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ರೀನಾ (ಪ್ರಥಮ) ಹಾಗೂ ರೋನಿಶ ಜಾನ್ (ದ್ವಿತೀಯ), ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ರೋನಿಶ ಜಾನ್ ಹಾಗೂ ರೀನಾ (ಪ್ರಥಮ), ಕವಿತ ಸತ್ಯದೇವ, ಶಾಂತಿ ದೇವದಾಸ್ (ದ್ವಿತೀಯ).

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಮಂಜುನಾಥ್ ಪಿ.ಎಲ್. (ಪ್ರಥಮ), ಆಕಾಶ್ (ದ್ವಿತೀಯ). ಪುರುಷರ ಡಬಲ್ಸ್ ವಿಭಾಗದಲ್ಲಿ ಮಂಜುನಾಥ್ ಪಿ.ಎಲ್. ಹಾಗೂ ರಾಮ್‍ದೇವ್ (ಪ್ರಥಮ). ಮಲ್ಲೇಂಗಡ ರಚನ್ ಪೊನ್ನಪ್ಪ ಹಾಗೂ ರಶೀದ್ (ದ್ವಿತೀಯ).

ಹುಡುಗರು ಹಾಗೂ ಹುಡುಗಿಯರ ವಿಭಾಗದಲ್ಲಿ ಮಂಜುನಾಥ್ ಪಿ.ಎಲ್ ಹಾಗೂ ರೀನಾ (ಪ್ರಥಮ), ದ್ವಿತೀಯ ನಮಿತ ಹಾಗೂ ಮಲ್ಲೇಂಗಡ ರಚನ್ ಪೊನ್ನಪ್ಪ (ದ್ವಿತೀಯ) ಮತ್ತು ರಾಮದೇª À(ಪ್ರಥಮ) ಹಾಗೂ ಅನೀಸ್ ಮೊಹಮ್ಮದ್ (ದ್ವಿತೀಯ).

ಈ ಸಂದರ್ಭದಲ್ಲಿ ನಿವೃತ ಶಿಕ್ಷಕಿ ಕಸ್ತೂರಿ ಗೋವಿಂದಮ್ಮಯ್ಯ, ನಿವೃತ ದೈಹಿಕ ಶಿಕ್ಷಕರಾದ ಲಕ್ಷ್ಮಣ್ ಸಿಂಗ್ ಹಾಗೂ ತೀರ್ಪುಗಾರರಾದ ಆಕಾಶ್ ಮತ್ತು ವಿಲ್ಸರ್ ಅವರನ್ನು ಸನ್ಮಾನಿಸ ಲಾಯಿತು. ಕಾರ್ಯಕ್ರಮದ ನಿರ್ವಹಣೆ ಯನ್ನು ಗೀತಾ ಗಿರೀಶ್ ಮತ್ತು ಕೆ.ಸಿ. ಕಾರ್ಯಪ್ಪ ನಡೆಸಿಕೊಟ್ಟರು. ಆಯಿಷಾ ಆಸೀಫ್ ವಂದಿಸಿದರು.