ಸೋಮವಾರಪೇಟೆ, ಸೆ. 24: ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಬ್ಯಾಂಕ್‍ನ ವಾರ್ಷಿಕ ಮಹಾಸಭೆ ಅಧ್ಯಕ್ಷ ಟಿ.ಆರ್. ಪುರುಷೋತ್ತಮ್ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು.

ಈ ಹಿಂದೆ ಸಂಘದಲ್ಲಿ ರೂ. 18 ಲಕ್ಷ ಠೇವಣಿ ಸಂಗ್ರಹವಾಗಿತ್ತು. ಪ್ರಸಕ್ತ ರೂ. 3 ಕೋಟಿ ಠೇವಣಿ ಸಂಗ್ರಹಿಸಲಾಗಿದ್ದು, ಬ್ಯಾಂಕ್‍ನ ಸ್ವಂತ ನಿಧಿಯಿಂದ 1500 ಸದಸ್ಯರಿಗೆ ರೂ. 3.50 ಕೋಟಿಗಳಷ್ಟು ಸಾಲವನ್ನು ವಿತರಿಸಲಾಗಿದೆ ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು. ರೂ. 1.53 ಕೋಟಿ ವೆಚ್ಚದಲ್ಲಿ ರೈತಭವನ ನಿರ್ಮಿಸಲಾಗಿದೆ ಎಂದರು. ಸಭೆಯಲ್ಲಿ ಉಪಾಧ್ಯಕ್ಷ ಬಿ.ಜಿ. ಪೂವಮ್ಮ, ನಿರ್ದೇಶಕರುಗಳಾದ ಬಿ.ಇ. ಬೋಪಯ್ಯ, ಕೆ.ಆರ್. ಕೊಮಾರಪ್ಪ, ಡಿ. ಭಗವಾನ್, ಬಿ.ಬಿ. ಸತೀಶ್, ಕೆ.ಟಿ. ಅರುಣ್ ಕುಮಾರ್, ಎಂ.ಟಿ. ದಾಮೋದರ್, ಹೆಚ್.ಬಿ. ಶಿವಕುಮಾರ್, ಎನ್.ಸಿ. ಬಾಬು ರಾಜೇಂದ್ರ ಪ್ರಸಾದ್, ಹೆಚ್.ಎಸ್. ಹೂವಮ್ಮ, ಪಿ.ಸಿ. ಬೇಲೂರಯ್ಯ, ಹೆಚ್.ಟಿ. ಮಂಜುನಾಥ್, ಪ್ರಭಾರ ವ್ಯವಸ್ಥಾಪಕ ಶಿವಕುಮಾರ್ ಉಪಸ್ಥಿತರಿದ್ದರು.