ಮಡಿಕೇರಿ, ಸೆ. 24: ಇಲ್ಲಿನ ಮಂಗಳಾದೇವಿ ನಗರದ ರೋಶನಾರ ಪಂಪ್ ಹೌಸ್ ಬಳಿಯ ರಸ್ತೆ ಗುಂಡಿಬಿದ್ದು ವಾಹನ ಸಂಚಾರಕ್ಕೆ ಹಾಗೂ ಪಾದಚಾರಿಗಳಿಗೆ ನಡೆಯಲು ತೊಂದರೆಯುಂಟಾಗಿ ತೀರಾ ಹದಗೆಟ್ಟಿತ್ತು. ಈ ಬಗ್ಗೆ ನಗರಸಭೆಯ ಗಮನ ಸೆಳೆದರೂ, ಸೂಕ್ತವಾಗಿ ಸ್ಪಂದಿಸದ ಕಾರಣ ಸ್ಥಳೀಯ ನಾಗರಿಕರು ಗುಂಡಿಬಿದ್ದ ರಸ್ತೆಗೆ ಕಲ್ಲು-ಮಣ್ಣು ಹಾಕಿ, ಚರಂಡಿಯ ಮಣ್ಣನ್ನು ತೆಗೆದು, ಕಾಡು ಕಡಿದು ಸ್ವಚ್ಛಗೊಳಿಸಿದರು.