ಮಡಿಕೇರಿ, ಸೆ. 21: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವದರೊಂದಿಗೆ ಶಿಸ್ತನ್ನು ಮೈಗೂಡಿಸಿಕೊಂಡು ದೇಶಸೇವೆ ಮಾಡಲು ಮುಂದಾಗಬೇಕೆಂದು ಭಾರತೀಯ ಭೂಸೇನೆಯ ಲೆಫ್ಟಿನೆಂಟ್ ಜನರಲ್ ಪಿವಿಎಸ್ಎಂ, ವಿಎಸ್ಎಂ ಜನರಲ್ ಇನ್ ಕಮಾಂಡ್ ಪಟ್ಟಚೆರುವಂಡ ಸಿ. ತಿಮ್ಮಯ್ಯ ಕರೆ ನೀಡಿದರು.
ಮಡಿಕೇರಿ ಕೊಡವ ಸಮಾಜ ಮತ್ತು ಕೊಡವ ವಿದ್ಯಾನಿಧಿ ವತಿಯಿಂದ ನಗರದ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ವಿದ್ಯಾರ್ಥಿಗಳು ತಮ್ಮ ಸಾಧನೆಯ ಹಾದಿಯಲ್ಲಿ ಎದುರಾಗುವ ಸವಾಲು ಗಳಿಗೆ ಧೃತಿಗೆಡದೇ ಅವುಗಳನ್ನು ಸಮರ್ಥವಾಗಿ ಎದುರಿಸುವ ಮನೋಬಲವನ್ನು ಹೊಂದಬೇಕು. ಯಾವದೇ ಕ್ಷೇತ್ರದಲ್ಲಿ ಮುಂದಡಿ ಇಡುವ ಮುನ್ನ ಆ ಕ್ಷೇತ್ರವನ್ನು ಪ್ರೀತಿಸುವ ಮನೋಭಾವವನ್ನು ವಿದ್ಯಾರ್ಥಿಗಳು ಹೊಂದಿದಾಗ ಮಾತ್ರವೇ ಸಾಧನೆಯ ಗುರಿ ತಲುಪಲು ಸಾಧ್ಯ ಎಂದರು.1863ರಲ್ಲಿ 4 ಮಂದಿ ಹಿರಿಯ ರಿಂದ ಆರಂಭಗೊಂಡ ಕೊಡವ ವಿದ್ಯಾನಿಧಿ 150 ವರ್ಷಗಳನ್ನೇ ಪೂರೈಸಿದೆ. ಕೊಡವ ಜನಾಂಗದ ಮಕ್ಕಳ (ಮೊದಲ ಪುಟದಿಂದ) ಶೈಕ್ಷಣಿಕ ಪ್ರಗತಿಗೆ ಹಿರಿಯರು ರೂಪಿಸಿದ ಮುಂದಾಲೋಚನೆಯ ಯೋಜನೆ ಇಂದು ಹೆಮ್ಮರವಾಗಿ ಬೆಳೆದಿರುವ ಬಗ್ಗೆ ಲೆಫ್ಟಿನೆಂಟ್ ಜನರಲ್ ಪಿ.ಸಿ. ತಿಮ್ಮಯ್ಯ ಶ್ಲಾಘನೆ ವ್ಯಕ್ತಪಡಿಸಿದರು. 800ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ವಿದ್ಯಾನಿಧಿಯಿಂದ ನೆರವು ನೀಡಿರುವದು ದೊಡ್ಡ ಸಾಧನೆಯೆಂದು ಬಣ್ಣಿಸಿದರು.
ಇಂದು ಶೈಕ್ಷಣಿಕ ಕ್ಷೇತ್ರದಲ್ಲಿ ಭಾರಿ ಬದಲಾವಣೆಗಳಾಗಿದೆ. ಹಲವು ರಂಗಗಳಲ್ಲಿ ಸಾಧನೆ ಮಾಡಲು ವಿಫುಲ ಅವಕಾಶಗಳಿವೆ. ಶಾಲಾ ಕಾಲೇಜುಗಳು ವಿದ್ಯಾ ಮಂದಿರಗಳಾಗಿದ್ದು, ಅಲ್ಲಿ ಶಿಸ್ತು, ಮಾನವೀಯತೆ ಮತ್ತು ಮೌಲ್ಯಯುತ ಶಿಕ್ಷಣವನ್ನು ಧಾರೆಎರೆಯಬೇಕು ಎಂದು ಅನಿಸಿಕೆ ವ್ಯಕ್ತಪಡಿಸಿದರು. ಭೂ ಸೇನೆಯ 32 ವಿಭಾಗದ ಉಸ್ತುವಾರಿ ಯನ್ನು ತಾನು ನಿರ್ವಹಿಸಿದ್ದು, ಸಾಮಾನ್ಯ ಯುವಕನನ್ನು ಕೂಡ ಸಮರ್ಥ ಅಧಿಕಾರಿಯನ್ನಾಗಿ ರೂಪಿಸುವ ಸಾಮಥ್ರ್ಯ ಸೈನ್ಯಕ್ಕಿದೆ. ಶಿಸ್ತು, ಮಾನವೀಯತೆ ಮತ್ತು ಮೌಲ್ಯಾಧಾರಿತ ವ್ಯವಸ್ಥೆಯಿಂದ ಮಾತ್ರವೇ ಇದು ಸಾಧ್ಯವಾಗಿದೆ ಎಂದು ಲೆ.ಜ. ತಿಮ್ಮಯ್ಯ ಪ್ರತಿಪಾಧಿಸಿದರು.
ಲೆ.ಜ. ಕೋದಂಡ ಸೋಮಯ್ಯ ಅವರ ಆದರ್ಶ, ಸ್ಪೂರ್ತಿ ಮತ್ತು ತಮ್ಮ ತಂದೆ ದೇಶ ಸೇವೆ ಮಾಡುವಂತೆ ಹೇಳಿದ ಪ್ರೇರಣಾ ನುಡಿಗಳೇ ನನ್ನನ್ನು ಈ ಸ್ಥಾನಕ್ಕೆ ತಂದು ನಿಲ್ಲಿಸಿದೆ ಎಂದು ನುಡಿದರು.
ದಾನಿಗಳಾದ ಪಾಲೆಕಂಡ ಜಿ. ಬೆಳ್ಯಪ್ಪ ಮಾತನಾಡಿ, ಕೊಡವ ಸಮುದಾಯದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಸಾಧನೆ ತೋರುವ ಮೂಲಕ ತಮ್ಮ ಜನಾಂಗ ಮತ್ತು ಹೆತ್ತವರಿಗೆ ಗೌರವ ತರಬೇಕು ಎಂದು ಸಲಹೆ ನೀಡಿದರು. ಸಾಧ್ಯವಾದಷ್ಟು ಉಪಯೋಗವಿಲ್ಲದ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯುವಂತೆ ಕಿವಿಮಾತು ಹೇಳಿದ ಬೆಳ್ಯಪ್ಪ, ಕೊಡವ ಸಮುದಾಯ ಶ್ರೀಮಂತ ಸಂಸ್ಕøತಿ, ಆಚಾರ, ಪದ್ದತಿ ಮತ್ತು ಶಿಸ್ತುಗಳನ್ನು ಮೈಗೂಡಿಸಿ ಕೊಂಡಿದೆ. ಈ ವಿಚಾರಗ ಳಿಂದಾಗಿಯೇ ಇಂದು ಸಮುದಾಯ ಸಮಾಜದ ಗೌರವಗಳಿಗೆ ಪಾತ್ರವಾಗಿದೆ ಎಂದರು.
ಇದೇ ಸಂದರ್ಭ ಲೆ.ಜ. ತಿಮ್ಮಯ್ಯ ಮತ್ತು ಪಾಲೆಕಂಡ ಜಿ. ಬೆಳ್ಯಪ್ಪ ಅವರನ್ನು ಕೊಡವ ಸಮಾಜ ಮತ್ತು ಕೊಡವ ವಿದ್ಯಾನಿಧಿ ವತಿಯಿಂದ ಸನ್ಮಾನಿಸಲಾಯಿತು.
ಕೊಡವ ವಿದ್ಯಾನಿಧಿ ಅಧ್ಯಕ್ಷ ಕೂತಂಡ ಪಿ. ಉತ್ತಪ್ಪ ಹಾಗೂ ಕೊಡವ ಸಮಾಜ ಅಧ್ಯಕ್ಷ ಕೊಂಗಂಡ ಎಸ್. ದೇವಯ್ಯ ಅವರಿಗೆ ಲೆ.ಜ. ತಿಮ್ಮಯ್ಯ ಭಾರತೀಯ ಸೇವೆಯ ಗೌರವ ಫಲಕ ಮತ್ತು ಸೈಬರ್ ಇಂಟೆಲಿಜೆನ್ಸ್ ಸೈನಿಕನ ಪುತ್ಥಳಿಯನ್ನು ಗೌರವ ಸೂಚಕವಾಗಿ ಸಮರ್ಪಿಸಿದರು.
ಬಳಿಕ ಗಣ್ಯರು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ತೋರಿದ 32 ವಿದ್ಯಾರ್ಥಿಗಳಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು.
ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ. ಪುಷ್ಪಾ ಕುಟ್ಟಣ್ಣ, ಮಡಿಕೇರಿ ಕೊಡವ ಸಮಾಜದ ನಿರ್ದೇಶಕರು, ವಿದ್ಯಾರ್ಥಿಗಳ ಪೋಷಕರು ಈ ಸಂದರ್ಭ ಉಪಸ್ಥಿತರಿದ್ದರು.