ಇಂದು ವಾರ್ಷಿಕ ಮಹಾಸಭೆ

ಕೂಡಿಗೆ, ಸೆ. 21: ಕೂಡುಮಂಗಳೂರು ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸಭೆಗಳಲ್ಲಿ ತೀರ್ಮಾನಿಸಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡು ರೂ. 20.10 ಲಕ್ಷ ಲಾಭಗಳಿಸಿದೆ ಎಂದು ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್‍ಕುಮಾರ್ ತಿಳಿಸಿದ್ದಾರೆ. ಕೂಡುಮಂಗಳೂರು ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಕಳೆದ ವಾರ್ಷಿಕ ಸಭೆಯಲ್ಲಿ ಕೈಗೊಂಡ ತೀರ್ಮಾನಗಳನ್ನು ಅನುಷ್ಠಾನಗೊಳಿಸುವದರ ಮೂಲಕ ರೈತರ ಪ್ರಗತಿಗೆ ಸಹಕಾರಿಯಾಗಿದೆ. ಸಂಘವು 3632 ಸದಸ್ಯರನ್ನು ಹೊಂದಿದ್ದು, ಠೇವಣಿ ಹಣವಾಗಿ ರೂ. 929.83 ಲಕ್ಷದೊಂದಿಗೆ ಸದಸ್ಯರಿಗೆ ವಿವಿಧ ರೀತಿಯ ಸಾಲಗಳನ್ನು ವಿತರಿಸಲಾಗಿದೆ.

ರೈತರಿಗೆ ಕೆಸಿಸಿ ಸಾಲ ರೂ. 543.29 ಲಕ್ಷ, ಜಾಮೀನು ಸಾಲು ರೂ. 3.95 ಲಕ್ಷ, ನಿರಖು ಠೇವಣಿ ರೂ. 8.35 ಲಕ್ಷ, ಸ್ವಸಹಾಯ ಗುಂಪು ರೂ. 14.87 ಲಕ್ಷ, ಭವಿಷ್ಯನಿಧಿ ಸಾಲ ರೂ. 8.07 ಲಕ್ಷ, ಆಭರಣ ಸಾಲ ರೂ. 210.38 ಲಕ್ಷ, ವ್ಯಾಪಾರಭಿವೃದ್ಧಿ ಸಾಲ 96.95 ಲಕ್ಷ, ಕೃಷಿ ಟ್ರ್ಯಾಕ್ಟರ್ ಸಾಲ ರೂ. 15.20 ಲಕ್ಷ, ಜಂಟಿ ಗುಂಪು ಸಾಲ 5.52 ಲಕ್ಷ, ಪಿಗ್ಮಿ ಸಾಮಾನ್ಯ ಸಾಲ 402.96, ಆಸಾಮಿ ಸಾಲ ರೂ. 3.53 ಲಕ್ಷ ಹಣವನ್ನು ನೀಡಲಾಗಿದ್ದು, 2019-20ನೇ ಸಾಲಿನಲ್ಲಿ ರೂ. 20.10 ಲಕ್ಷ ಲಾಭವನ್ನು ಸಂಘ ಗಳಿಸಿದೆ ಎಂದು ತಿಳಿಸಿದ್ದಾರೆ.

2019-20ನೇ ವಾರ್ಷಿಕ ಮಹಾಸಭೆ ತಾ. 22 ರಂದು (ಇಂದು) ಸಂಘದ ರೈತ ಸಹಕಾರ ಭವನದಲ್ಲಿ ನಡೆಯಲಿದೆ ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಪಿ. ಮೀನಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಚೇರಿ ಉದ್ಘಾಟನೆ

ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನವೀಕೃತ ಕಚೇರಿಯ ಉದ್ಘಾಟನೆ ನಡೆಯಲಿದೆ.

ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ನೆರವೇರಿಸಲಿದ್ದಾರೆ. ನಗದು ವಿಭಾಗದ ಕಚೇರಿಯನ್ನು ಕೆಡಿಸಿಸಿ ಬ್ಯಾಂಕ್‍ನ ಅಧ್ಯಕ್ಷ ಕೊಡಂದೇರ ಪಿ. ಗಣಪತಿ ನೆರವೇರಿಸಲಿದ್ದಾರೆ. ಇತರರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.