ವೀರಾಜಪೇಟೆ, ಸೆ. 13: ವೀರಾಜಪೇಟೆ ಗಾಂಧಿನಗರದ ಗಣಪತಿ ಸೇವಾ ಸಮಿತಿಯಿಂದ ಸಂಗೀತ ಕಲಾವಿದ ಬಾಲಕ ಎಂ.ಡಿ. ಆಯಷ್‍ಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಯಾಗಿದ್ದ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಶುದ್ಧ ಹಾಗೂ ಪವಿತ್ರವಾದ ಮನಸ್ಸಿನಿಂದ ದೇವರನ್ನು ಪ್ರಾರ್ಥಿಸಬೇಕು. ಇಂದಿನ ಸಮಾಜದಲ್ಲಿ ಸುಖ, ಸಂತೋಷ, ನೆಮ್ಮದಿ, ಆನಂದ ಎಂಬದು ನಿಜವಾದ ಪರಮಾತ್ಮ ಎಂದು ಹೇಳಿದರು.

ಅತಿಥಿಯಾಗಿ ಭಾಗವಹಿಸಿದ್ದ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ, ಗಾಂಧಿನಗರದ ಗಣಪತಿ ಸೇವಾ ಸಮಿತಿ ದೇವರ ಆರಾಧನೆಯೊಂದಿಗೆ ಸಮಾಜ ಸೇವೆಯನ್ನು ಮುಂದುವರೆಸಲಿ ಎಂದರು.

ಸಭೆಯನ್ನುದ್ದೇಶಿಸಿ ಡಾ. ದೀಪಕ್, ಡಿವೈಎಸ್‍ಪಿ ಜಯಕುಮಾರ್, ವೈದ್ಯಾಧಿಕಾರಿ ವಿಶ್ವನಾಥ್ ಸಿಂಪಿ, ಉದ್ಯಮಿ ಅಕ್ಬರ್, ಡಿ.ಸಿ. ಧ್ರುವ ಮತ್ತಿತರರು ಮಾತನಾಡಿದರು. ಸೇವಾ ಸಮಿತಿಯ ಅಧ್ಯಕ್ಷ ಪಿ. ನಿತೀನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಡಾ. ಸುಪ್ರಿತಾ, ಉದ್ಯಮಿ ನಿಸ್ಸಾರ್ ಅಹಮ್ಮದ್, ಅಪ್ಪನೆರವಂಡ ಝಾನ್ಸಿ ಕಿರಣ್, ಸೇವಾ ಸಮಿತಿಯ ಮಾಜಿ ಅಧ್ಯಕ್ಷ ಪಿ.ಎ. ಮಂಜುನಾಥ್, ಕುಯ್ಮಂಡ ರಾಕೇಶ್ ಬಿದ್ದಪ್ಪ. ಯೋಗೀಶ್ ನಾಯ್ಡು ಸಮಿತಿ ಸದಸ್ಯರುಗಳು ಹಾಜರಿದ್ದರು.